‘ಕಾಂತಾರ’ದ ಮೂಗುತಿ ಸುಂದರಿಗೆ ಮೂಗು ಚುಚ್ಚಲು ಹೇಳಿದ್ದು ಅದೇ ಶೆಟ್ರು

ಕಾಂತಾರ (Kantara) ಸಿನಿಮಾದ ಗೆಲುವು ಆ ಸಿನಿಮಾದ ತಂತ್ರಜ್ಞರಿಗೆ ಮತ್ತು ನಟರಿಗೆ ಕಂಡು ಕೇಳರಿಯದಷ್ಟು ಹೆಸರು ತಂದು ಕೊಡುತ್ತಿದೆ. ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಪ್ರವೇಶ ಮಾಡಿರುವ ಸಪ್ತಮಿ ಗೌಡ (Sapthami Gowda) ಅಂತೂ ರಾತ್ರೋರಾತ್ರಿ ಸ್ಟಾರ್ ನಟಿಯಾಗಿ ಬದಲಾಗಿದ್ದಾರೆ. ಅದರಲ್ಲೂ ಅವರು ಎರಡು ಕಡೆ ಮೂಗು ಚುಚ್ಚಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕಾಂತಾರ ಸಿನಿಮಾದಲ್ಲಿ ಲೀಲಾ (Leela) ಪಾತ್ರ ಮಾಡಿರುವ ಸಪ್ತಮಿ ಗೌಡಗೆ ಇದು ಮೊದಲ ಸಿನಿಮಾ. ಈ ಸಿನಿಮಾಗೆ ಹೇಗೆ ಆಯ್ಕೆಯಾದರು ಎನ್ನುವ ಕುರಿತು ಅವರು ಮಾತನಾಡಿದ್ದಾರೆ. ಕಾಂತಾರ ಸಿನಿಮಾಗೆ ಸಪ್ತಮಿ ಗೌಡ ನಾಯಕಿ ಎಂದು ರಿಷಬ್ ಹೇಳಿದಾಗ, ಸಿನಿಮಾ ತಂಡವೇ ಮೊದ ಮೊದಲು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲವಂತೆ. ಆನಂತರ ಸಪ್ತಮಿ ಗೌಡಗೆ ತರಬೇತಿ ಕೊಟ್ಟು, ಕ್ಯಾಮೆರಾ ಮುಂದೆ ನಿಲ್ಲಿಸಿದಂತೆ ರಿಷಬ್. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

ಈ ಸಿನಿಮಾದಲ್ಲಿ ಸಪ್ತಮಿ ಗೌಡ ನಿರ್ವಹಿಸಿದ್ದು ಡಿಗ್ಲಾಮರ್ ಪಾತ್ರ. ಅದು ಫಾರಿಸ್ಟ್ ಆಫೀಸರ್ (Forest Officer) ರೋಲ್. ಈ ಪಾತ್ರದಲ್ಲಿ ಸಪ್ತಮಿ ಹೇಗೆ ಕಾಣುತ್ತಾರೆ ಎನ್ನುವುದು ಮೊದಲು ತಲೆಬಿಸಿ ಆಗಿತ್ತಂತೆ. ಆದರೆ, ರಿಷಬ್ ಅವರಿಗೆ ಈ ವಿಷಯದಲ್ಲಿ ತುಂಬಾ ಸ್ಪಷ್ಟತೆ ಇತ್ತು. ಹಾಗಾಗಿ ಅವರು ಹೇಗೆ ಹೇಳಿದರೋ ಹಾಗೆಯೇ ಕೇಳಿದೆ. ನಾನು ಎರಡು ಕಡೆ ಮೂಗು ಚುಚ್ಚಿಕೊಳ್ಳಲು ಕಾರಣ ರಿಷಬ್ ಎಂದಿದ್ದಾರೆ ಸಪ್ತಮಿ ಗೌಡ. ಈ ಸಿನಿಮಾದ ಪಾತ್ರಕ್ಕಾಗಿಯೇ ಅವರು ಮೂಗು ಚುಚ್ಚಿಸಿಕೊಂಡರಂತೆ.

ಬರೋಬ್ಬರಿ ಒಂದು ತಿಂಗಳ ಕಾಲ ಸಪ್ತಮಿಗೆ ರಿಷಬ್ (Rishabh Shetty) ತರಬೇತಿ ನೀಡಿದ್ದಾರೆ. ಆ ಪಾತ್ರ ಹೇಗೆ ಬರುತ್ತದೆ, ಹೇಗೆ ಇರಲಿದೆ, ಮ್ಯಾನರಿಸಂ ಕೂಡ ಹೀಗಿಯೇ ಇರಬೇಕು ಎಂದು ಪಕ್ಕಾ ತಯಾರಿ ಮಾಡಿಯೇ ಸಪ್ತಮಿ ಅವರನ್ನು ಶೂಟಿಂಗ್ ಗೆ ಕರೆದುಕೊಂಡು ಹೋಗಿದ್ದಾರಂತೆ. ಹಾಗಾಗಿ ತಾವು ಅಂದುಕೊಂಡಂತೆಯೇ ಪಾತ್ರ ಮೂಡಿ ಬಂದಿದೆ ಎನ್ನುವುದು ರಿಷಬ್ ಮಾತು.

ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ಇಂದು ಹಿಂದಿಯಲ್ಲಿ, ನಾಳೆ ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ತಮಿಳು ಮತ್ತು ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ.

ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.

ನಿರ್ಮಾಪಕ ವಿಜಯ್ ಕಿರಗಂದೂರು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲೂ ಚಿತ್ರ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ಕೆಜಿಎಫ್ ಯಶಸ್ಸು ಮುನ್ನುಡಿ ಬರೆದಿತ್ತು. ಕಾಂತಾರದ ಮೂಲಕ ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *