ಹಣ ನೀಡಲಿಲ್ಲವೆಂದು ವೃದ್ಧ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ- ತಾಯಿ ಸ್ಥಿತಿ ಗಂಭೀರ

MONEY

ನವದೆಹಲಿ: ಹಣ (Money) ನೀಡಲಿಲ್ಲವೆಂದು ಪಾಪಿ ಮಗನೇ (Son) ವೃದ್ಧ ತಂದೆಯನ್ನು (Father) ಕೊಲೆ ಮಾಡಿ, ತಾಯಿಯ (Mother) ಮೇಲೆ ಹಲ್ಲೆ ನಡೆಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ನವದೆಹಲಿಯ (NewDehli) ಫತೇ ನಗರದ ನಿವಾಸಿಗಳಾದ ಸ್ವರ್ಣಜೀತ್ ಸಿಂಗ್ (65) ಮೃತ ದುರ್ದೈವಿ ಹಾಗೂ ಪತ್ನಿ ಅಜೀಂದರ್ ಕೌರ್ (60) ತೀವ್ರ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಇವರ ಮಗ ಜಸ್ದೀಪ್ ಸಿಂಗ್ (34) ಷೇರು ಮಾರುಕಟ್ಟೆಯಲ್ಲಿ ಲಕ್ಷಗಟ್ಟಲೇ ಹಣವನ್ನು ಕಳೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ತನ್ನ ತಂದೆಯಿಂದ ಹಣ ಕೊಡಲು ಬೇಡಿಕೆಯಿಟ್ಟಿದ್ದಾನೆ. ಇದಕ್ಕೆ ಆತನ ತಂದೆ ಸ್ವರ್ಣಜೀತ್‌ ಹಣ ನೀಡಲು ನಿರಾಕರಿಸಿದ್ದಾನೆ.

ಇದರಿಂದ ಕೋಪಗೊಂದ ಜಸ್ಪೀದ್‌ ಸಿಂಗ್‌ ಹಾಗೂ ಆತನ ಪತ್ನಿ ಸೇರಿ ಸ್ವರ್ಣಜೀತ್ ಸಿಂಗ್ ಹಾಗೂ ಅಜೀಂದರ್ ಕೌರ್ ಮೇಲೆ ಸುತ್ತಿಗೆ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಸ್ವರ್ಣಜೀತ್ ಸಿಂಗ್ ಹಾಗೂ ಅಜೀಂದರ್ ಕೌರ್ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಸ್ವರ್ಣಜೀತ್‌ ಸಿಂಗ್‌ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಹಾಗೂ ಆತನ ಪತ್ನಿ ಅಜೀಂದರ್ ಕೌರ್ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಮೋದಿಯಂತೆ ಬೊಮ್ಮಾಯಿ ಸಿಎಂ ಹುದ್ದೆ ಬಿಟ್ಟು ಉಳಿದೆಲ್ಲ ಖಾತೆಗಳನ್ನ ಹಂಚಿಕೆ ಮಾಡ್ಬೇಕು – ಯತ್ನಾಳ್

ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಜಸ್ದೀಪ್ ಸಿಂಗ್‌ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಬಗ್ಗೆ ಮಾತನಾಡುತ್ತಿರೋ ಯತ್ನಾಳ್‍ರನ್ನ ಹೈಕಮಾಂಡ್ ಗಮನಿಸ್ತಿದೆ: ನಾರಾಯಣಸ್ವಾಮಿ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *