ಮೂಲಂಗಿ ಮಾರಿ ಜೀವನ ನಡೆಸುತಿದ್ದ ಪತ್ನಿಯನ್ನ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಪತಿ

ಧಾರವಾಡ: ಮೂಲಂಗಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಪತ್ನಿಯನ್ನು ಪತಿಯೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಧಾರವಾಡದಲ್ಲಿ(Dharwad) ನಡೆದಿದೆ.

ನಗರದ ಕೋಳಿಕೇರಿ ತೋಟದಲ್ಲಿ ಈ ಕೊಲೆ ನಡೆದಿದ್ದು, ಮಂಜವ್ವ ಪಠಾದ್ (42) ಅವಳನ್ನು ಆಕೆಯ ಪತಿ ಗದಿಗೆಪ್ಪ ಕೊಲೆ ಮಾಡಿದ್ದಾನೆ. ಗದಿಗೆಪ್ಪ ಕುಡಿತದ ಚಟಕ್ಕೆ ಬಿದ್ದಿದ್ದ. ಈ ಹಿನ್ನೆಲೆ ಪತಿ(Husband) ಹಾಗೂ ಪತ್ನಿಯ(Wife) ನಡುವೆ ಆಗಾಗ ಜಗಳ ಆಗುತಿತ್ತು. ಕಳೆದ ರಾತ್ರಿ ಕೂಡಾ ಪತಿ, ಪತ್ನಿ ನಡುವೆ ಜಗಳ ಆಗಿತ್ತು. ಆದರೆ ಇಂದು ಮಂಜವ್ವ ಹೊಲದಲ್ಲಿ ಮೂಲಂಗಿ ತೊಳೆಯುವಾಗ ಗದಿಗೆಪ್ಪ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಎಷ್ಟೇ ದೊಡ್ಡ ಹುಲಿ ಆದ್ರೂ, ಕಾನೂನಿಗೆ ಒಂದೇ – ಬಿಎಸ್‌ವೈಗೆ ಟಾಂಗ್ ನೀಡಿದ ಯತ್ನಾಳ್

crime

ಮಂಜವ್ವ ಪತಿ ಗದಿಗೆಪ್ಪ ಈ ಹಿಂದೆ ಕೂಡಾ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಹೊಲದ ವಿಚಾರವಾಗಿ ಒಂದು ಕೊಲೆ ಮಾಡಿ ಜೈಲು ಸೇರಿದ್ದ. ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಈತ ಸೆರೆವಾಸ ಮುಗಿಸಿ ಜೈಲಿನಿಂದ ಹೊರ ಬಂದಿದ್ದ. ಅಲ್ಲದೇ ಮಂಜವ್ವಳ ಸಹೋದರಿ ಕೂಡಾ ಕೆಲ ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಸದ್ಯ ಶಹರ ಪೊಲೀಸ್ ಠಾಣೆ ಪೊಲೀಸರು ಮಂಜವ್ವಳ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ:  ಮುರುಘಾ ಮಠದಿಂದ ಇಬ್ಬರು ಬಾಲಕರು ನಾಪತ್ತೆ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *