ಊಟದಲ್ಲಿನ ಗರಂ ಮಸಾಲಾ ಥರ ಸೋನು ಶ್ರೀನಿವಾಸ್ ಗೌಡ: ಹೀಗ್ಯಾಕೆ ಅಂದ್ರು ಬಿಗ್ ಬಾಸ್ ಮನೆಮಂದಿ

ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸೋನು ಶ್ರೀನಿವಾಸ್ ಗೌಡ ಈಗ ಬಿಗ್ ಬಾಸ್ ಓಟಿಟಿಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಈಗ ಕಿಚ್ಚನ ಪಂಚಾಯಿತಿಯಲ್ಲಿ ಬಿಗ್ ಬಾಸ್ ಓಟಿಟಿಯಿಂದ ಬಿಗ್ ಬಾಸ್ ಸೀಸನ್ 9ಗೆ ಯಾರು ಹೋಗುತ್ತಾರೆ ಎಂಬ ಚರ್ಚೆ ಜೋರಾಗಿದೆ. ಮನೆ ಮಂದಿ ಎಲ್ಲಾ ಸೋನು ಕಡೆ ಬೆಟ್ಟು ಮಾಡಿ, ತೋರಿಸುತ್ತಿದ್ದಾರೆ.

ದೊಡ್ಮನೆಯ ಒಟಿಟಿ ಶೋ ಮುಗಿದ ಬಳಿಕ ಟಿವಿಯಲ್ಲಿ ಬಿಗ್ ಬಾಸ್ ಕನ್ನಡ 9ನೇ ಸೀಸನ್ ಆರಂಭ ಆಗಲಿದೆ. ಒಟಿಟಿಯಲ್ಲಿ ಇರುವ ಕೆಲವು ಸ್ಪರ್ಧಿಗಳು ಟಿವಿ ಆವೃತ್ತಿಗೂ ಎಂಟ್ರಿ ಪಡೆಯಲಿದ್ದಾರೆ. ಅಂಥ ಅರ್ಹತೆ ಯಾರಿಗೆಲ್ಲ ಇದೆ ಎಂದು ಈ ವಾರದ ಪಂಚಾಯಿತಿಯಲ್ಲಿ ಸುದೀಪ್ ಪ್ರಶ್ನಿಸಿದರು. ಆಗ ಬಹುತೇಕರು ಸೋನು ಶ್ರೀನಿವಾಸ್ ಗೌಡ ಹೆಸರನ್ನು ಹೇಳಿದರು. ಇದನ್ನೂ ಓದಿ: ವಿಜ್ಞಾನ ಮತ್ತು ಪುರಾಣ ಮಿಶ್ರಣದ ಧ್ರುವ 369 ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ರಾಜ್ಯಪಾಲ

ಸೋನು ಏನೂ ಮಾಡದಿದ್ದರೂ ಮನರಂಜನೆ ಸಿಗತ್ತೆ. ಅವಳು ಮಾತನಾಡಿದ್ರೇನೇ ಎಂಟರ್‌ಟೇನ್ಮೆಂಟ್ ಇರುತ್ತೆ ಎಂದು ರಾಕೇಶ್ ಅಡಿಗ ಹೇಳಿದರು. ಊಟದಲ್ಲಿನ ಗರಂ ಮಸಾಲಾ ಥರ ಸೋನು ಎಂದಿದ್ದಾರೆ ಸೋಮಣ್ಣ ಮಾಚಿಮಾಡ. ಸೋನುಗೆ ಎಲ್ಲಿ ಏನು ಮಾತನಾಡಬೇಕು ಅಂತ ಗೊತ್ತಾಗಲ್ಲ. ಅದೇ ಅವರಿಗೆ ಪ್ಲಸ್ ಆಗಿದೆ ಎಂಬುದು ಅಕ್ಷತಾ ಕುಕ್ಕಿ ಅಭಿಪ್ರಾಯ. ಸೋನು ಆಲ್ ರೌಂಡರ್ ಇದ್ದಂತೆ. ಟಾಸ್ಕ್ ಮಾಡೋಕೂ ಸೈ, ಎಂಟರ್‌ಟೇನ್ಮೆಂಟ್ ನೀಡೋಕೂ ಜೈ. ಅವಳು ಇದ್ದ ಕಡೆ ಮಜಾ ಮತ್ತು ಒಳ್ಳೆಯ ಮಸಾಲಾ ಇರತ್ತೆ ಎಂದು ಸಾನ್ಯಾ ಅಯ್ಯರ್ ಹೇಳಿದ್ದಾರೆ.

ಸೋನು ಮನರಂಜನೆಯ ಪ್ಯಾಕೇಜ್ ಇದ್ದಂತೆ. ಅವಳ ವ್ಯಕ್ತಿತ್ವವೇ ಹಾಗಿದೆ. ಅವಳ ರೀತಿ ಯಾರೂ ಇರೋಕೆ ಆಗಲ್ಲ ಎಂದು ನಂದು ಹೇಳಿದ್ದಾರೆ. ಸೋನು ಒಳಗಡೆ ಒಂದು ಹೋರಾಟ ನಡೆಯುತ್ತಿದೆ ಎಂದು ಜಶ್ವಂತ್ ಹೇಳಿದ್ದಾರೆ. ಎಲ್ಲರಿಂದ ಸಖತ್ ಮೆಚ್ಚುಗೆ ಬಂದಿರೋದಕ್ಕೆ ಸೋನು ಖುಷಿಪಟ್ಟಿದ್ದಾರೆ. ಬಿಗ್ ಬಾಸ್ ಓಟಿಟಿಯಿಂದ ಗೆದ್ದು, ಬಿಗ್ ಬಾಸ್ ಸೀಸನ್ 9ಗೆ ಹೋಗುತ್ತಾರಾ ಸೋನು, ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *