ಧಾರ್ಮಿಕ ಆಚರಣೆ ಸುಳಿವು ಕೊಟ್ಟ ಅಶೋಕ್- ವಾರ್ಡ್‍ಗೊಂದೇ ಗಣೇಶ ರೂಲ್ಸ್ ವಾಪಸ್

ಬೆಂಗಳೂರು: ಕಳೆದ ಎರಡು ವರ್ಷದಿಂದ ಕೊರೊನಾದಿಂದಾಗಿ ಅದ್ಧೂರಿ ಗಣೇಶೋತ್ಸವಕ್ಕೆ ಅಡ್ಡಿಯಾಗಿತ್ತು. ಕೊನೆಗೂ ವಿಘ್ನೇಷನಿಗಿದ್ದ ವಾರ್ಡ್‍ಗೊಂದೇ ಗಣೇಶ ಎಂಬ ವಿಘ್ನ ಮುಕ್ತಾಯವಾಗಿದೆ.

ಹೌದು, ವಾರ್ಡ್‍ಗೊಂದೇ ಗಣೇಶ ಎಂಬ ನಿಯಮ ತೆಗೆದು ಅದ್ಧೂರಿ ಗಣೇಶೋತ್ಸವ ಆಚರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ. ಈ ಸಂಬಂಧ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ವಾರ್ಡ್‍ಗೆ ಒಂದು ಗಣೇಶ ಕೂರಿಸುವ ರೂಲ್ಸ್ ಇಲ್ಲ. ಎರಡು ವರ್ಷದ ಹಿಂದೆ ಹೇಗೆ ನಡೀತಾ ಇತ್ತು. ಹಾಗೆ ಗಣೇಶೋತ್ಸವ ನಡೆಯುತ್ತೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್‍ಗೂ ಸೂಚಿಸುತ್ತೇವೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಕಾಂಗ್ರೆಸ್ ಬದುಕಿದ್ದರೆ ರಾಷ್ಟ್ರಧ್ವಜವನ್ನು ಉಚಿತವಾಗಿ ನೀಡಲಿ: ಈಶ್ವರಪ್ಪ

ಈ ಹಿಂದೆ ವಾರ್ಡ್‍ಗೊಂದೇ ಗಣೇಶ ಎಂದು ನಿಯಮ ಮುಂದುವರಿಸಲು ಚಿಂತನೆ ನಡೆಸುತ್ತಿದ್ದೇವೆ ಅಂತ ಬಿಬಿಎಂಪಿ ಕಮೀಷನರ್ ಹೇಳಿದ್ರು. ಈ ಬೆನ್ನಲ್ಲೇ ಸಾರ್ವಜನಿಕವಾಗಿ ಹಾಗೂ, ಗಣೇಶೋತ್ಸವ ಸಮಿತಿ ಮತ್ತು ಶ್ರೀರಾಮಸೇನೆ ಬೇಸರ ವ್ಯಕ್ತಪಡಿಸಿತ್ತು. ಇದೀಗ ಸಚಿವ ಅಶೋಕ್ ವಾರ್ಡ್‍ಗೆ ಒಂದು ಗಣೇಶ ಕೂರಿಸುವ ರೂಲ್ಸ್ ಇಲ್ಲ ಎಂದಿದ್ದಾರೆ.

ಕೊನೆಗೂ ವಿಘ್ನೇಷನಿಗಿದ್ದ ವಾರ್ಡ್‍ಗೊಂದೇ ಗಣೇಶ ಎಂಬ ವಿಘ್ನ ಮುಕ್ತಾಯವಾಗಿದೆ. ಇನ್ನೇನಿದ್ರು ಡಿಜೆ.. ಲೈಟಿಂಗ್.. ಉತ್ಸವ.. ಅರ್ಕೆಸ್ಟ್ರಾ.. ಬೀದಿ ಬೀದಿಯಲ್ಲೂ ನಾನಾ ಅವತಾರಗಳ ಗಣೇಶನ ಮೂರ್ತಿ ನೋಡೋದಷ್ಟೆ ಬಾಕಿ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *