ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ: ಶ್ರೀರಾಮುಲು

ಬೀದರ್: ಸಿದ್ದರಾಮಯ್ಯ ಎಲ್ಲರನ್ನು ಮುಗಿಸಿ ಬಂದಿರುವ ವ್ಯಕ್ತಿ, ಅವರು ಭಸ್ಮಾಸುರ ಇದ್ದಂತೆ ಸಾರಿಗೆ ಸಚಿವ ಶ್ರೀರಾಮುಲು ಅವರು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೀದರ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಲ್ಲರನ್ನು ಮುಗಿಸಿ ಬಂದಿರುವ ವ್ಯಕ್ತಿ, ಅವರು ಭಸ್ಮಾಸುರ ಇದ್ದಂತೆ. ಯಾವ ಪಕ್ಷಕ್ಕೆ ಹೋಗತ್ತಾರೆ ಅಲ್ಲಿ ಎಲ್ಲರನ್ನು ಮುಗಿಸಿ ಬರುತ್ತಾರೆ. ಅಷ್ಟೇ ಅಲ್ಲ ಜೆಡಿಎಸ್‍ನ ತಂದೆ – ಮಗನನ್ನು ಕೂಡ ಬಿಟ್ಟಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚೋದಿಲ್ಲ, ಆದರೆ ….. : ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?

SIDDARAMAIAH

ಅಂದು ಸೋಲಿನ ಭೀತಿಯಲ್ಲಿ ಸಿದ್ದರಾಮಯ್ಯ ಬಾದಾಮಿಗೆ ಬಂದರು. ಈಗ ಸಿದ್ದರಾಮಯ್ಯ ಬಾದಾಮಿಯಲ್ಲಿ ನಿಂತರೆ ಡೆಪಾಸಿಟ್ ಕಳೆದುಕೊಳ್ಳುತ್ತಾರೆ. ಅದಕ್ಕಾಗಿ ಸಿದ್ದರಾಮಯ್ಯ ಇದೀಗ ಕೋಲಾರ, ಚಾಮರಾಪೇಟೆ, ವರುಣ, ಚಾಮುಂಡೇಶ್ವರಿ ಎಂದು ಕ್ಷೇತ್ರ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಪಕ್ಷ ಸೂಚನೆ ಕೊಟ್ಟರೆ ನಾನು ಬಾದಾಮಿಯಲ್ಲಿ ಸ್ಪರ್ಧೆ ಮಾಡಲು ರೆಡಿಯಾಗಿದ್ದೇನೆ. ಬದಾಮಿಯಲ್ಲಿ ಮತ್ತೆ ಸಿದ್ದು ವಿರುದ್ಧ ಸ್ಪರ್ಧೆ ಮಾಡುತ್ತೇನೆಯೇ ಹೊರೆತು ಹಿಂದೆ ಸರಿಯುವ ಮಾತೇ ಇಲ್ಲ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಪಿಎಂ ಆವಾಸ್ ಯೋಜನೆಯಲ್ಲಿ ರಾಜ್ಯಕ್ಕೆ ಅನುದಾನ ಕಡಿತ – ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ?: ದಿನೇಶ್ ಗುಂಡೂರಾವ್

ನಂತರ ಸಿದ್ದರಾಮೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಮ್ಮ ಅಸ್ತಿತ್ವಕ್ಕಾಗಿ ಸಿದ್ದು ಹಾಗೂ ಡಿಕೆಶಿ ಮದ್ಯ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದ್ದು, ಪಕ್ಷ ನಿಷ್ಠೆ ಎಂದು ಒಬ್ಬರು ಹೋಗುತ್ತಿದ್ದರೆ, ಸ್ವಂತ ಶಕ್ತಿ ಇದೆ ಎಂದು ಮತ್ತೊಬ್ಬ ಹೋಗುತ್ತಿದ್ದಾನೆ. ಮೊತ್ತೊಂದು ಕಡೆ ಸಿದ್ದರಾಮೋತ್ಸವ ನಡೆಯುತ್ತಿದ್ದು, ಸಿದ್ದರಾಮಯ್ಯ ಉತ್ಸವ ಮೂರ್ತಿ ಇದ್ದಂತೆ. ಹೀಗಾಗಿ ಕೇವಲ ಉತ್ಸವಗಳು ಇದ್ದಾಗ ಮಾತ್ರ ಮೂರ್ತಿಗಳನ್ನು ಹೊರ ತೆಗೆಯಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *