ಹೋಂ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದ – ಶಿಕ್ಷಕನ ವಿರುದ್ಧ ಪೋಷಕರ ಆಕ್ರೋಶ

ಕೊಪ್ಪಳ: ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಬಾಲಕನೊಬ್ಬನಿಗೆ ಶಿಕ್ಷಕನೋರ್ವ ಮನಬಂದಂತೆ ಹಿಗ್ಗಾಮುಗ್ಗ ಥಳಿಸಿರುವ ಅಮಾನವೀಯ ಕೃತ್ಯ ನಗರದ ಧನ್ವಂತರಿ ಕಾಲೋನಿಯಲ್ಲಿ ನಡೆದಿದೆ.

ಶಿಕ್ಷಕನನ್ನು ಲೋಹಿತ್ ಎಂದು ಗುರುತಿಸಲಾಗಿದ್ದು, ಈತ ನವೋದಯ, ಸೈನಿಕ್ ಶಾಲೆಯ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ. ಹೋಮ್ ವರ್ಕ್ ಮಾಡಿಲ್ಲ ಎಂಬ ಸಣ್ಣ ಕಾರಣಕ್ಕೆ ೧೦ ವರ್ಷದ ಪ್ರಥಮ್ ಎಂಬ ಬಾಲಕನಿಗೆ ಮೈ ಮೇಲೆ ಬರೆ ಬರುವಂತೆ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ಅಲ್ಲದೇ ಪ್ರಥಮ್ ಕಿವಿಯಲ್ಲಿ ಕೂಡ ರಕ್ತ ಬರುವಂತೆ ಹೊಡೆದಿದ್ದಾನೆ. ಇದನ್ನೂ ಓದಿ : Exclusive- ಮದುವೆ ಆಗದೇ ಸುಚೇಂದ್ರ ಪ್ರಸಾದ್ ಜೊತೆ 11 ವರ್ಷ ಇದ್ದೆ : ನಟಿ ಪವಿತ್ರಾ ಲೋಕೇಶ್

 ಇದಲ್ಲದೇ ತರಗತಿಗೆ ಬರುವ ಹಲವಾರು ಮಕ್ಕಳ ಮೇಲೆ ಇದೇ ರೀತಿ ಲೋಹಿತ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಶಿಕ್ಷಕನ ಅಮಾನವೀಯ ವರ್ತನೆಯಿಂದಾಗಿ ವಿದ್ಯಾರ್ಥಿ ಪ್ರಥಮ್ ಸಂಕಷ್ಟ ಅನುಭವಿಸುತ್ತಿದ್ದಾನೆ. ಸದ್ಯ ಮೈ ಮೇಲೆ ಗಾಯವಾಗಿರುವ ಪ್ರಥಮ್‌ಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಲೋಹಿತ್ ಕ್ರೂರ ವರ್ತನೆ ವಿರುದ್ಧ ಬಾಲಕನ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.  ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

Live Tv

Comments

Leave a Reply

Your email address will not be published. Required fields are marked *