ತಮಿಳು ಖ್ಯಾತ ನಟ ಸಿಂಬು ಮನೆಮುಂದೆ ಹೈಡ್ರಾಮಾ, ಸೀರಿಯಲ್ ನಟಿ ಧರಣಿ

ಮಿಳಿನ ಖ್ಯಾತ ನಟ ಸಿಂಬು ಮದುವೆ ವಿಚಾರವಾಗಿ ಆಗಾಗ್ಗೆ ಸ್ಪೋಟಕ ಸುದ್ದಿಗಳು ಬರುತ್ತಲೇ ಇರುತ್ತವೆ. ಸಿಂಬು ಮದುವೆಯಾಗಲು ಸಾವಿರಾರು ಹುಡುಗಿಯರು ಸಾಲಲ್ಲಿ ನಿಂತಿದ್ದಾರೆ. ನಿಮ್ಮ ಬಾಳಸಂಗಾತಿ ಹೇಗಿರಬೇಕು ಎಂದು ತಮಿಳು ಹುಡುಗಿಯರನ್ನು ಕೇಳಿ ನೋಡಿ, ಅವರು ಹೇಳುವ  ಒಂದೇ ಒಂದು ಹೆಸರು ‘ಸಿಂಬು’. ಇದನ್ನೂ ಓದಿ : 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್

ಇಂತಹ ಸಿಂಬುವನ್ನು ವರಿಸುವುದಕ್ಕಾಗಿ ಸಾಮಾನ್ಯ ಹುಡುಗಿಯರು ಮಾತ್ರವಲ್ಲ, ಸಿಲೆಬ್ರಿಟಿಗಳು ಮತ್ತು ಕಿರುತೆರೆಯ ಜನಪ್ರಿಯ ನಟಿಯರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾಗಿಯೇ ಸಿಂಬು ಮದುವೆ ವಿಚಾರವಾಗಿ ಆಗಾಗ್ಗೆ ತಮಿಳು ಸಿನಿಮಾ ರಂಗದಲ್ಲಿ ಬ್ರೇಕಿಂಗ್ ಸುದ್ದಿಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇಂಥದ್ದೊಂದು ತಾಜಾ ಸುದ್ದಿ ನಿನ್ನೆ ರಾತ್ರಿ ಸಿಕ್ಕಿದೆ. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

ತಮಿಳಿನ ಜೀ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಪ್ರಸಿದ್ಧ ಧಾರಾವಾಹಿ ‘ಯಾರಡಿ ನೀ ಮೋಹಿನಿ’ ಖ್ಯಾತಿಯ ಶ್ರೀನಿಧಿ ನಿನ್ನೆ ರಾತ್ರಿ ಸಿಂಬು ಮನೆಯ ಮುಂದೆ ಧರಣಿ ಕೂತಿದ್ದಾರೆ. ಅದಕ್ಕೆ ಕಾರಣ ತಾವು ಸಿಂಬು ಅವರನ್ನು ನೋಡಲೇಬೇಕು ಎನ್ನುವುದು ಅವರ ಹಠವಾಗಿತ್ತು. ಸಿಂಬು ಕುಟುಂಬದ ಸದಸ್ಯರು ಎಷ್ಟೇ ಸಮಾಧಾನ ಮಾಡಿದರೂ, ಶ್ರೀನಿಧಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಮನೆಯ ಮುಂದೆ ಹೈಡ್ರಾಮಾನೇ ನಡೆದು ಹೋಯಿತು. ಇದನ್ನೂ ಓದಿ : ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

ಶ್ರೀನಿಧಿ ಅವರು ಸಿಂಬು ಮನೆ ಮುಂದೆ ಬರುವುದಕ್ಕೆ ಕಾರಣವೂ ಇದೆ. ಈಕೆ ಸಿಂಬು ಅಪ್ಪಟ ಅಭಿಮಾನಿ. ಈ ಹಿಂದೆ ತಾವು ಮದುವೆ ಆಗುವುದಾದರೆ, ಸಿಂಬು ಅವರನ್ನೇ ಆಗುವುದಕ್ಕೆ ಹೇಳಿಕೆ ನೀಡಿದ್ದರು. ವಿಡಿಯೋ ಕೂಡ ಮಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಕೂಡ ಆಗಿತ್ತು. ಇದೀಗ ಅದೇ ಹುಡುಗಿಯೇ ಸಿಂಬು ಮನೆ ಮುಂದೆ ಕೂತಿದ್ದಾರೆ. ಕೊನೆಗೆ ಅವರನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸಲಾಗಿದೆ.

Comments

Leave a Reply

Your email address will not be published. Required fields are marked *