ಮುಂದಿನ 50 ದಿನ ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ ಶ್ರೀ ವಿಧುಶೇಖರ ಭಾರತಿ ಸ್ವಾಮಿ

ಬೆಂಗಳೂರು: ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿದಾನಂಗಳವರ ವಿಜಯಯಾತ್ರೆ 2022 ಪ್ರಯುಕ್ತ ನಿನ್ನೆಯಿಂದ ಬೆಂಗಳೂರಿನ ಶೃಂಗೇರಿ ಶಂಕರಮಠ ಶಂಕರಪುರಂನಲ್ಲಿ ಮುಂದಿನ 50 ದಿನಗಳ ಕಾಲ ವಾಸ್ತವ್ಯ ಹೂಡಿ ಭಕ್ತಾದಿಗಳಿಗೆ ಆಶೀರ್ವಚನ ನೀಡಲು ಆರಂಭಿಸಿದ್ದಾರೆ. ಶ್ರೀಗಳ ವಿಜಯಯಾತ್ರೆ ಶುಕ್ರವಾರ ಬೆಂಗಳೂರಿಗೆ ಆಗಮಿಸಿದಾಗ ಭಕ್ತಾದಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು.

ಬೆಂಗಳೂರಿನ ಬಸವನಗುಡಿಯ ನಾರ್ಥ್ ರೋಡ್ ವೇದ ಮಾಗಡಿ ಕನಿಕರ ಪಾಠಶಾಲಾ ಮುಂಭಾಗದಿಂದ ಶೃಂಗೇರಿ ಶಂಕರಮಠ ಶಂಕರಪುರಂ ವರೆಗೂ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಅದ್ದೂರಿಯ ಮೆರವಣಿಗೆ, ವೇದ ಮಂತ್ರ ಘೋಷ ಹಾಗೂ ವಿವಿಧ ಜಾನಪದ ಕಲೆಗಳೊಂದಿಗೆ ನಡೆಯಿತು.

ಇಂದಿನಿಂದ ಐವತ್ತು ದಿನಗಳ ಕಾಲ ಬೆಳಗ್ಗೆ ಮತ್ತು ಸಂಜೆ ಶ್ರೀಗಳು ಬೆಂಗಳೂರಿನ ಶೃಂಗೇರಿ ಶಂಕರಮಠದಲ್ಲಿ ಭಕ್ತಾದಿಗಳಿಗೆ ದರ್ಶನ ಹಾಗೂ ಆಶೀರ್ವಚನ ನೀಡಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Comments

Leave a Reply

Your email address will not be published. Required fields are marked *