ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಸಹಾಯಹಸ್ತ

ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ನ್ಯಾಯ ಸಿಗಬೇಕು ಎಂದು ಇಡೀ ಕರ್ನಾಟಕದ ಜನರು ಕೇಳಿಕೊಳ್ಳುತ್ತಿದ್ದಾರೆ. ಪ್ರಸ್ತುತ ದಾಳಿ ಮಾಡಿದ ಆರೋಪಿದ ಸುಳಿವು ಇನ್ನೂ ಪೊಲೀಸರಿಗೆ ಸಿಕ್ಕದಿರುವುದು ಸಾರ್ವಜನಿಕರ ಆಕ್ರೋಶ ಹೆಚ್ಚು ಮಾಡುತ್ತಿದೆ. ಯುವತಿಗೆ ನ್ಯಾಯ ಸಿಗಬೇಕು ಎಂದು ಆಕೆ ಓದಿದ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.

ಬಡ ಕುಟುಂಬದಿಂದ ಬಂದ ಯುವತಿಯ ಚಿಕಿತ್ಸೆಗೆ ರಾಜಕೀಯ ಗಣ್ಯರು ಸೇರಿದಂತೆ ಸಾರ್ವಜನಿಕರು ಸಹಾಯಹಸ್ತ ಚಾಚಿದ್ದಾರೆ. `ಪಬ್ಲಿಕ್ ಟಿವಿ’ ಎಲ್ಲ ರಾಜಕೀಯ ಗಣ್ಯರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ್ದು, ಎಲ್ಲರೂ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಪಬ್ಲಿಕ್ ಟಿವಿಯೂ ಸಹ  ಸಂತ್ರಸ್ತೆಗೆ 50 ಸಾವಿರ ರೂ. ಸಹಾಯಧನ ನೀಡಿದೆ. ಇದನ್ನೂ ಓದಿ: ಆಸಿಡ್ ದಾಳಿಗೆ ಒಳಗಾದ ಯುವತಿ ಚಿಕಿತ್ಸೆಗೆ 1 ಲಕ್ಷ ರೂ. ಚಕ್ ಕೊಟ್ಟ  BBMP 

ಕಾಂಗ್ರೆಸ್ ಮುಖಂಡ ಭರತ್ ರೆಡ್ಡಿ ಅವರು ತಮ್ಮ ಕಂಪನಿಯಲ್ಲಿಯೇ ಕೆಲಸದ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ. ಇದರ ಜೊತೆಗೆ 1 ಲಕ್ಷ ರೂ. ಕೊಟ್ಟಿದ್ದಾರೆ. ಆರೋಗ್ಯ ಸಚಿವ ಕೆ.ಸುಧಾಕರ್‌ 5 ಲಕ್ಷ ರೂ. ಸಹಾಯ ಮಾಡಿದರು.

ಬಿಜೆಪಿ ಸಚಿವ ಮುರುಗೇಶ್ ನಿರಾಣಿ 1 ಲಕ್ಷ, ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಲಾ 50 ಸಾವಿರ ರೂ., ಮಾಜಿ ಶಾಸಕ ಮಾನಪ್ಪ ವಜ್ಜಲ್ 1 ಲಕ್ಷ ರೂ., ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ 1 ಲಕ್ಷ ರೂ., ಶಾಸಕ ಗೂಳಿಹಟ್ಟಿ ಶೇಖರ್ 2 ಲಕ್ಷ ರೂ., ಮಾಜಿ ಶಾಸಕ ಮುನಿರಾಜು 50 ಸಾವಿರ ರೂ, ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು 

ನೀವು ಇವರಿಗೆ ಸಹಾಯ ಮಾಡಲು ಇಚ್ಛಿಸಿದರೆ ಈ ಕೆಳಗಿನ ಬ್ಯಾಂಕ್‍ ಖಾತೆಗೆ ಹಣ ಹಾಕಬಹುದು.
ಹೆಸರು: LAKSHMAMMA B
ಖಾತೆ ನಂ: 3196101011122
ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್
IFSC ಕೋಡ್: CNRB0003196
ಬ್ರಾಂಚ್‌: HEGGANAHALL
ಬೆಂಗಳೂರು: 560091
PhonePay: 8105253022 (ರಾಜು, ಸಂತ್ರಸ್ಥೆ ತಂದೆ)

Comments

Leave a Reply

Your email address will not be published. Required fields are marked *