ಮುಸ್ಲಿಂ ಗುಲಾಮಿ ಹೆಸರು ತೆಗೆದು ಸರ್ಕಲ್‍ಗಳಿಗೆ ಹಿಂದೂ ರಾಜರ, ಸಾಹಿತಿಗಳ ಹೆಸರಿಡಬೇಕು: ಆಂದೋಲ ಶ್ರೀ

ಕಲಬುರಗಿ: ಮುಸ್ಲಿಂ ಗುಲಾಮಿ ಹೆಸರು ತೆಗೆದು ನಗರದ ಆ ಸರ್ಕಲ್‍ಗಳಿಗೆ ಹಿಂದೂ ರಾಜರ, ಸಾಹಿತಿಗಳ ಹೆಸರಿಡಬೇಕು ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಊರು ಗ್ರಾಮಗಳಿಗೆ ಮುಸ್ಲಿಂ ರಾಜರ ಹೆಸರುಗಳಿವೆ. ಮುಸ್ಲಿಂ ರಾಜರು ತಮಗೆ ಬೇಕಾದಂತೆ ತಮ್ಮವರ ಹೆಸರು ಇಟ್ಟಿದ್ದಾರೆ. ಜಿಲ್ಲೆಯಲ್ಲಿ ಕೂಡಾ ಅನೇಕ ಮುಸ್ಲಿಂ ರಾಜರ ಹೆಸರುಗಳಿವೆ. ಗುಲಾಮಿ ಹೆಸರು ಬದಲಾಯಿಸಿ ಹಿಂದೂ ರಾಜ ಮಹಾರಾಜರು, ಸಾಹಿತಿಗಳ ಹೆಸರನ್ನಿಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಝೊಮ್ಯಾಟೊ ಡೆಲಿವರಿ ಬಾಯ್ ಆದ ಶಿಕ್ಷಕ- ಕಥೆಯೇ ರೋಚಕ!

ಹಿಂದೂಗಳು ಬಿಜೆಪಿಗೆ ಮತಹಾಕಿ ಅಧಿಕಾರಕ್ಕೆ ತಂದಿದ್ದಾರೆ. ಹಿಂದೂಗಳ ಬೇಡಿಕೆಯನ್ನು ಇಡೇರಿಸಬೇಕು. ನಿಮ್ಮನ್ನು ಬಿಟ್ಟು ಕಾಂಗ್ರೆಸ್, ಜೆಡಿಎಸ್‍ನವರು ಮಾಡುತ್ತಾರೆಯೇ? ಕಾನೂನಿನ ಪ್ರಕಾರ ಹಿಂದೂಗಳ ಬೇಡಿಕೆ ಈಡೇರಿಸಬೇಕು. ಹೆಸರು ಬದಲಾವಣೆ ಜೊತೆಗೆ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಜಾರಿಯಾದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ. ಮುಜರಾಯಿ ಅಧೀನಕ್ಕೆ ಒಳಪಡುವ ದೇವಸ್ಥಾನಗಳ ಸುತ್ತ ಕಡ್ಡಾಯವಾಗಿ ಹಿಂದೂಗಳಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

Comments

Leave a Reply

Your email address will not be published. Required fields are marked *