ರಾಜ್ಯದಲ್ಲಿ 48,905 ಮಂದಿಗೆ ಕೊರೊನಾ- 39 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾದ ನರ್ತನ ಯಾಕೋ ನಿಲ್ಲುವ ಲಕ್ಷಣ ಕಾಣ್ತಿಲ್ಲ. ರಾಜ್ಯದಲ್ಲಿ 48,905 ಕೇಸ್ ಬಂದಿದ್ದು, 39 ಮಂದಿ ಬಲಿ ಆಗಿದ್ದಾರೆ. ಬೆಂಗಳೂರಿನಲ್ಲಿ 22,427 ಮಂದಿಗೆ ಸೋಂಕು ತಗುಲಿದ್ದು, 8 ಮಂದಿ ಬಲಿ ಆಗಿದ್ದಾರೆ.

ತುಮಕೂರು, ಹಾಸನ, ಮೈಸೂರು, ಮಂಡ್ಯದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಕೇಸ್ ಬಂದಿದೆ. ಬಳ್ಳಾರಿ, ಧಾರವಾಡ, ಕಲಬುರಗಿ, ಕೋಲಾರ ಉಡುಪಿಯಲ್ಲಿ ಸಾವಿರಕ್ಕೂ ಹೆಚ್ಚು ಕೇಸ್ ಬಂದಿವೆ. ರಾಜ್ಯದಲ್ಲಿ ಒಂದು ವಾರದಲ್ಲಿ 201 ಜನ ಕೊರೊನಾಗೆ ಬಲಿಯಾಗಿದ್ದಾರೆ. ಇವರಲ್ಲಿ ಬಹುತೇಕರು ವಯೋವೃದ್ಧರೇ ಆಗಿದ್ದಾರೆ. ಇದನ್ನೂ ಓದಿ: ಆರೋಗ್ಯ ಸೂಚ್ಯಂಕದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಕ್ರಮ: ಡಾ.ಕೆ.ಸುಧಾಕರ್

ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ, ಬಾಗಲಕೋಟೆ 610, ಬಳ್ಳಾರಿ 1,141, ಬೆಳಗಾವಿ 791, ಬೆಂಗಳೂರು ಗ್ರಾಮೀಣ 828, ಬೆಂಗಳೂರು ನಗರ 22,427, ಬೀದರ್ 377, ಚಾಮರಾಜನಗರ 917, ಚಿಕ್ಕಬಳ್ಳಾಪುರ 734, ಚಿಕ್ಕಮಗಳೂರು 251, ಚಿತ್ರದುರ್ಗ 445, ದಕ್ಷಿಣ ಕನ್ನಡ 888, ದಾವಣಗೆರೆ 514, ಧಾರವಾಡ 1,523, ಗದಗ 318, ಹಾಸನ 2016, ಹಾವೇರಿ 297, ಕಲಬುರಗಿ 1007, ಕೊಡಗು 939, ಕೋಲಾರ 1,547, ಕೊಪ್ಪಳ 279, ಮಂಡ್ಯ 2,186, ಮೈಸೂರು 2,797, ರಾಯಚೂರು 276, ರಾಮನಗರ 187, ಶಿವಮೊಗ್ಗ 444, ತುಮಕೂರು 2,645, ಉಡುಪಿ 1,392, ಉತ್ತರ ಕನ್ನಡ 747, ವಿಜಯಪುರ 212, ಯಾದಗಿರಿ 170 ಹೊಸ ಪ್ರಕರಣಗಳು ವರದಿಯಾಗಿದೆ.

CORONA-VIRUS.

ಕೊರೊನಾ ಲಕ್ಷಣ ಇದ್ದರೆ ನಿಮಗೆ ನೀವೇ ವೈದ್ಯರಾಗಬೇಡಿ. ಡಾಕ್ಟರ್ ಬಳಿ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಮಧ್ಯೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಕೋವಿಡ್ ಮುಕ್ತರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ಸೋಂಕು ತಗುಲಿದೆ. ದೇಶದಲ್ಲಿ ಮೊನ್ನೆಗಿಂತ ನಿನ್ನೆ ಸ್ವಲ್ಪ ಮಟ್ಟಿಗೆ ಕೇಸ್ ಹೆಚ್ಚಿದೆ. ನಿನ್ನೆ 2.85 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 665 ಮಂದಿ ಬಲಿ ಆಗಿದ್ದಾರೆ. 2.99 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *