ಸರ್ಕಾರಕ್ಕೆ ನಮ್ಮನ್ನು ಬಂಧಿಸುವ ಶಕ್ತಿ ಇಲ್ಲ: ಡಿ.ಕೆ. ಸುರೇಶ್

ರಾಮನಗರ: ನಮ್ಮ ಪಾದಯಾತ್ರೆ ಕಟ್ಟಿ ಹಾಕುವ ಶಕ್ತಿ ಸರ್ಕಾರಕ್ಕೆ ಇಲ್ಲ. ಜನರ ಆರೋಗ್ಯ ದೃಷ್ಟಿ, ಬೆಂಗಳೂರಿನಲ್ಲಿ ಕೇಸ್ ಹೆಚ್ಚಳವಾಗುತ್ತಿರುವ ಕಾರಣ ಪಾದಯಾತ್ರೆ ರದ್ದು ಮಾಡಿದ್ದೇವೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ರಾಮನಗರದಲ್ಲಿ ಪಬ್ಲಿಕ್ ಟಿವಿ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಕೋವಿಡ್ ಹೆಚ್ಚಳವಾಗಿದ್ದನ್ನು ನೋಡಿ ನಮ್ಮ ಮೇಲೆ ಕೇಸ್ ಹಾಕಲು ಸರ್ಕಾರ ಪ್ಲ್ಯಾನ್ ಮಾಡಿತ್ತು. ಸರ್ಕಾರದ ವೈಫಲ್ಯದಿಂದ ಕೋವಿಡ್ ಹೆಚ್ಚಾಗಿದೆ. ಇದನ್ನು ಪಾದಯಾತ್ರೆ ಮೇಲೆ ಹಾಕುವ ಯತ್ನ ನಡೆದಿದೆ. ಈ ಕಾರಣ ಪಾದಯಾತ್ರೆ ರದ್ದು ಮಾಡುತ್ತಿದ್ದೇವೆ. ಇದು ಕೊನೆಯಲ್ಲ, ಆರಂಭ ಎಂದರು. ಇದನ್ನೂ ಓದಿ:  5 ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸಿದ್ದು ಪಕ್ಕ ಪ್ರತ್ಯಕ್ಷ

ಸರ್ಕಾರ ನಮ್ಮನ್ನು ಬಂಧಿಸುತ್ತದೆ ಎಂದು ಹೆದರಿ ಪಾದಯಾತ್ರೆ ರದ್ದು ಮಾಡುತ್ತಿಲ್ಲ. ಸರ್ಕಾರಕ್ಕೆ ಆ ಶಕ್ತಿಯೂ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ಡಿ.ಕೆ.ಸುರೇಶ್ ಸವಾಲೆಸೆದರು. ಇದನ್ನೂ ಓದಿ: ನೋಟಿಸ್‍ಗೆ ಹೆದರಲ್ಲ, ಜನರ ಹಿತದೃಷ್ಟಿಯಿಂದ ಪಾದಯಾತ್ರೆ ರದ್ದು: ಸಿದ್ದರಾಮಯ್ಯ

Comments

Leave a Reply

Your email address will not be published. Required fields are marked *