ರಾಷ್ಟ್ರೀಯ ಹಾಕಿ ತಂಡಕ್ಕೆ ಕರ್ನಾಟಕದ ಐವರು ಆಯ್ಕೆ

ಹಾಸನ: ರಾಷ್ಟ್ರೀಯ ಹಿರಿಯ ಮತ್ತು ಕಿರಿಯರ ಹಾಕಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಹಾಸನ ಜಿಲ್ಲೆಯ ಗ್ರಾಮೀಣ ಪ್ರದೇಶದ ಐದು ಜನ ಪ್ರತಿಭಾವಂತ ಕ್ರೀಡಾಪಟುಗಳನ್ನು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅಭಿನಂದಿಸಿದ್ದಾರೆ.

ಹಿರಿಯರ ತಂಡಕ್ಕೆ ಆಯ್ಕೆ ಯಾಗಿರುವ ಬಿ.ಎಂ.ಶೇಷೇಗೌಡ, ಎಚ್.ಅಂಜಲಿ ಮತ್ತು ಕಿರಿಯರ ರಾಷ್ಟ್ರೀಯ ತಂಡಕ್ಕೆ ಎಸ್.ಪಿ.ಲಿಖಿತ, ತೇಜಸ್ವಿನಿ, ಜೆ.ಚಂದನ್ ಹಾಗೂ ತರಬೇತುದಾರ ಎಚ್.ಟಿ.ವೀರೇಶ್ ಆಯ್ಕೆಗೊಂಡಿದ್ದಾರೆ. ಇದನ್ನೂ ಓದಿ: ಕೋತಿ ಅಂತ್ಯಸಂಸ್ಕಾರಕ್ಕೆ 1,500 ಮಂದಿ ಭಾಗಿ!

ಮೊದಲ ಬಾರಿಗೆ ಹಾಸನ ಜಿಲ್ಲೆಯ ಐವರು ಕ್ರೀಡಾಪಟುಗಳು ಆಯ್ಕೆ ಆಗಿರುವುದು ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ. ಈಗಾಗಲೇ ಜಾವಗಲ್ ಶ್ರೀನಾಥ್, ವಿಕಾಸ್‍ಗೌಡ ಸೇರಿದಂತೆ ಹಲವಾರು ಪ್ರಸಿದ್ಧ ಕ್ರೀಡಾಪಟುಗಳು ಹಾಸನ ಜಿಲ್ಲೆಯಿಂದ ಹೊರಹೊಮ್ಮಿದ್ದಾರೆ.

Comments

Leave a Reply

Your email address will not be published. Required fields are marked *