ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ

ಬೆಂಗಳೂರು: ಯಾರನ್ನು ಬೇಕಾದರೂ ಅರೆಸ್ಟ್ ಮಾಡಿಕೊಳ್ಳಿ, ನಾವು ಮೇಕೆದಾಟು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಗೃಹ ಸಚಿವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಹೊಸ ಎಮ್‍ಎಲ್‍ಸಿಗಳ ಪ್ರಮಾಣವಚನ ಸಮಾರಂಭ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರನ್ನ ಬೇಕಾದರೂ ಅರೆಸ್ಟ್ ಮಾಡಕೊಳ್ಳಲಿ. ಬೇಕಾದರೆ ನನ್ನ ಹಾಗೂ ಸಿದ್ದರಾಮಯ್ಯನವರನ್ನ ಇಬ್ಬರನ್ನು ಅರೆಸ್ಟ್ ಮಾಡಲಿ. ಪಕ್ಷದ ಶಾಸಕರನ್ನು ಕೂಡಾ ಅರೆಸ್ಟ್ ಮಾಡಲಿ. ನಾವು ಸರ್ಕಾರದ ನಿಯಮಗಳಿಗೆ ಗೌರವ ಕೊಡುತ್ತೇವೆ. ಈ ಸಭೆಯಲ್ಲಿ ಇಷ್ಟೊಂದು ಜನ ನನ್ನ ಹಿಂದೆ ನಿಂತಿದ್ದಾರೆ. ಯಾರನ್ನಾದರೂ ಮುಟ್ಟಲಿ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ

araga jnanendra

ವರ್ಚುವಲ್ ಮಾಡಿಕೊಂಡು ಬರೀ ಶಾಸಕರು, ಎಮ್‍ಎಲ್‍ಸಿಗಳನ್ನು ಕರೆದು ಪ್ರಮಾಣವಚನ ಕಾರ್ಯಕ್ರಮವನ್ನು ಅಸೆಂಬ್ಲಿ ಒಳಗಡೆ ಮಾಡಬೇಕಾಗಿತ್ತು. ಯಾವುದು ಇದು ಆಟ ಗೃಹ ಮಂತ್ರಿಗಳೇ ಏನ ಹೆದರಿಸತ್ತಿದ್ದೀರಾ? ಇಂತಹ ಕೊಡ್ಡು ಬೆದರಿಕೆಗಳಿಗೆಲ್ಲಾ ಕಾಂಗ್ರೆಸ್ ಪಾರ್ಟಿಯವರು ಹೆದರುವವರು ಅಲ್ಲ. ನಾನು ಜೈಲಿಗೆ ಹೋಗಲು ಕೂಡಾ ಸಿದ್ಧನಿದ್ದೇನೆ. ರಾಜ್ಯದ ಜನತೆಗೊಸ್ಕರ ನಾವು ಈ ಹೋರಾಟ ಮಾಡುತ್ತಿದ್ದೇವೆ. ಎಲ್ಲ ಕಾರ್ಯಕರ್ತರು ಪಾದಯಾತ್ರೆಗೆ ಬರುತ್ತಿದ್ದು ಜನರು ಕೂಡಾ ಪಕ್ಷಾತೀತವಾಗಿ ಬರುತ್ತಾರೆ ಎಂದರು.

ಈ ಹೆದರಿಕೆಗಳನ್ನೆಲ್ಲ ಅವರು ತಮ್ಮ ಸ್ವಂತ ಊರಲ್ಲಿ ಇಟ್ಟುಕೊಳ್ಳಲಿ ನಮ್ಮ ಹತ್ತಿರ ಅಲ್ಲ. ಸರ್ಕಾರ ಸಭೆ ಸಮಾರಂಭಕ್ಕೆ ಅನುಮತಿ ಇಲ್ಲ ಅಂತ ಅಂದವರು ಅಸೆಂಬ್ಲಿ ಒಳಗಡೆ ಸಭೆ ನಡೆಸಬೇಕಿತ್ತು. ಯಾಕೆ ಇಲ್ಲಿ ಎಮ್‍ಎಲ್‍ಸಿಗಳಿಗೆ ಪ್ರಮಾಣವಚನಕ್ಕೆ ಅವಕಾಶ ಮಾಡಿಕೊಟ್ಟರು. ಸಭೆಗೆ ಇಷ್ಟೊಂದು ಜನರು ಬಂದಿದ್ದು, ಬಿಜೆಪಿಯವರಿಗೆ ಈಗ ಕೊರೊನಾ ಬರುವದಿಲ್ಲವೇ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಇದು ಸಭೆಯಲ್ಲವೆ ಎಂದು ಪ್ರಶ್ನಿಸಿದರು.

ಯಾರಿಗೆ ಹೆದರಿಸುತ್ತಿದ್ದಾರೆ ಅವರು ನಾನು 40 ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾವು ಪಾದಯಾತ್ರೆ ಮಾಡುತ್ತಿರುವುದು ನೀರಿಗೊಸ್ಕರ ರಾಜ್ಯದ ಜನತೆಗೊಸ್ಕರವಾಗಿ. ಬಿಜೆಪಿಯವರು ಈ ಯೋಜನೆ ಕುರಿತು ಜನರಿಗೇನು ನ್ಯಾಯ ಒದಗಿಸಿಕೊಡಲಿಲ್ಲ ಅದನ್ನು ನಾವು ಮಾಡುತ್ತಿದ್ದೇವೆ. ಇದನ್ನ ಯಾರ ಕೈಇಂದಲೂ ತಡೆಯೋಕೆ ಆಗೋಲ್ಲ ಯಾರ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

Comments

Leave a Reply

Your email address will not be published. Required fields are marked *