ರೈಡರ್‌ ಸಿನಿಮಾ ಪೈರಸಿ – ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು

ಬೆಂಗಳೂರು: ರೈಡರ್‌ ಸಿನಿಮಾ ಪೈರಸಿ ಆದ ಹಿನ್ನೆಲೆಯಲ್ಲಿ ನಿರ್ಮಾಪಕ ಲಹರಿ ವೇಲು ಅವರು ಉತ್ತರ ವಿಭಾಗದ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಅಭಿನಯದ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ತಮಿಳು ಬ್ಲಾಸ್ಟರ್ಸ್‍ನಿಂದ ಪೈರಸಿಯಾಗಿದೆ. ಕಿಡಿಗೇಡಿಗಳ ವಿರುದ್ಧ ಚಿತ್ರತಂಡ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ:   ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಬಾರದು: ನಿಖಿಲ್ ಕುಮಾರಸ್ವಾಮಿ


ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ್ದ ಲಹರಿ ವೇಲು, ಪೈರಸಿ ಒಂದು ದೊಡ್ಡ ಪಿಡಗು. ರೈಡರ್ ಚಿತ್ರ ರಿಲೀಸ್ ಆಗಿ ಎರಡೇ ದಿನದಲ್ಲಿ ಪೈರಸಿ ಕಾಟ ಶುರುವಾಗಿದೆ. ಸಿನಿಮಾ ಚಿತ್ರ ಹಿಟ್ ಆಗಿದೆ. ಆದರೆ ತಮಿಳು ಬ್ಲಾಸ್ಟರ್ ವೆಬ್ ಸೈಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಚಾರವನ್ನು ನಮ್ಮ ಚಿತ್ರದಲ್ಲಿ ನಟಿಸಿರುವ ಪ್ರಥಮ್ ತಿಳಿಸಿದರು. ಪೈರಸಿ ಪಿಡುಗು ಅಂತ್ಯ ಕಾಣಬೇಕು. ಕರ್ನಾಟಕದಲ್ಲಿ ಹಿಟ್ ಆಗುವ ಎಲ್ಲಾ ಚಿತ್ರಗಳನ್ನ ಅಪ್ಲೋಡ್ ಮಾಡಿ ನಿರ್ಮಾಪಕರಿಗೆ ಲಾಸ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ:  ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಅದಿತಿ ಪ್ರಭುದೇವ?

Comments

Leave a Reply

Your email address will not be published. Required fields are marked *