ಸಮಾಧಿ ಬಳಿಯ ದೇವಸ್ಥಾನದಲ್ಲಿ ಅಪ್ಪು ಅಭಿಮಾನಿ ಮದುವೆ

ಬೆಂಗಳೂರು: ಕಂಠೀರವ ಸ್ಟುಡಿಯೋ ಬಳಿಯ ದೇವಸ್ಥಾನವೊಂದರಲ್ಲಿ ಅಪ್ಪು ಅಭಿಮಾನಿಗಳು ಮದುವೆಯಾಗಿದ್ದಾರೆ.

ಗುರುರಾಜ್ ಮತ್ತು ಗಂಗಾ ವಿಶೇಷವಗಿ ಮದುವೆಯಾಗಲು ನಿರ್ಧರಿಸಿದ್ದರು. ಅಪ್ಪು ಅಭಿಮಾನಿಗಳು ಆಗಿರುವುದರಿಂದ ಅಪ್ಪು ಸಮಾಧಿ ಬಳಿ ಮದುವೆಯಾಗಿ ಗೌರವ ಸೂಚಿಸಲು ಇಚ್ಚಿಸಿದ್ದರು. ಹೀಗಾಗಿ ಈ ಜೋಡಿ ಬಳ್ಳಾರಿಯಿಂದ ಅಪ್ಪು ಸಮಾಧಿ ಇರುವ ಸ್ಥಳಕ್ಕೆ ಬಂದಿದ್ದರು.

 

ಅಪ್ಪು ಸಮಾಧಿ ಬಳಿ ಮದುವೆಯ ಬಳಿ ಮದುವೆಯಾಗುವ ಬಗ್ಗೆ ಶಿವಣ್ಣ ಮತ್ತು ರಾಘವೇಂದ್ರ ರಾಜ್ ಕುಮಾರ್ ಜೊತೆ ಮಾತು ಕತೆಯನ್ನು ಜೋಡಿ ನಡೆಸಿದ್ದಾರೆ. ಆದರೆ ಅಪ್ಪು ಸಮಾಧಿ ಬಳಿ ಮದುವೆಯಾಗಲು ರಾಜ್ ಫ್ಯಾಮಿಲಿಯಿಂದ ಒಪ್ಪಿಗೆ ಇಲ್ಲದ ಕಾರಣ, ಕಂಠೀರವ ಸ್ಟುಡಿಯೋ ಬಳಿಯೇ ಇರುವ ಆಂಜಿನೇಯ ದೇವಸ್ಥಾನದಲ್ಲಿ ನವ ಜೋಡಿ ಸಪ್ತಪದಿ ತುಳಿದಿದ್ದಾರೆ.

ಗೆಳೆಯರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ನಾಳೆ ಶಿವಣ್ಣನ ಮನೆಗೆ ಗುರುರಾಜ್ ಮತ್ತು ಗಂಗಾ ದಂಪತಿ ಹೋಗಿ ಆಶೀರ್ವಾದ ಪಡೆಯಲಿದ್ದಾರೆ. ಅಪ್ಪು ಅಭಿಮಾನಿಗಳು ಆಗಿರುವುದರಿಂದ ಕಂಠೀರವ ಸ್ಟುಡಿಯೋ ಬಳಿಯ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಅಭಿಮಾನ ಮೆರೆದಿದ್ದಾರೆ.

Comments

Leave a Reply

Your email address will not be published. Required fields are marked *