ಹಾನಗಲ್‍ನಲ್ಲಿ ಒಳ್ಳೆಯ ಹೃದಯವಂತ ಶಾಸಕನ ಪಡೆದುಕೊಂಡಿದ್ದೀರಿ: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಹಾನಗಲ್‍ನಲ್ಲಿ ಒಬ್ಬ ಒಳ್ಳೆಯ ಹೃದಯವಂತ ಶಾಸಕನ ಪಡೆದುಕೊಂಡಿದ್ದೀರಿ ಎಂದು ಹೇಳುವ ಮೂಲಕವಾಗಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಉಪಚುನಾವಣೆಯ ಗೆಲುವನ್ನು ಸಂಭ್ರಮಿಸಿದ್ದಾರೆ.

ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೆಬ್ಬಾಳ್ಕರ್ ಪ್ರಬುದ್ಧ ಮತದಾರರಿಗೆ ಅಭಿನಂದನೆ ಸಲ್ಲಿಸಲು ಬಯಸುವೆ. ಎಲೆಕ್ಷನ್ ಓಡಾಡುವ ವೇಳೆ ರಿಸಲ್ಟ್ ಗೊತ್ತಾಗುವ ಮಟ್ಟಿಗೆ ಮತದಾರರಲ್ಲಿ ಕ್ಲಿಯಾರಿಟಿ ಇತ್ತು. ಹಾನಗಲ್‍ನಲ್ಲಿ ಒಬ್ಬ ಒಳ್ಳೆಯ ಹೃದಯವಂತ ಶಾಸಕನ ಪಡೆದುಕೊಂಡಿದ್ದೀರಿ. ಹಾನಗಲ್ ಮತದಾರರ ಪಾದಗಳಿಗೆ ನಮಸ್ಕಾರ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೂಗಲ್ ಸರ್ಚ್‍ನಲ್ಲಿ ಸಿಕ್ಕ ಫ್ಲಿಪ್ಕಾರ್ಟ್ ನಂಬರ್ – ಕರೆ ಮಾಡಿ 2 ಲಕ್ಷ ಕಳ್ಕೊಂಡ

ಹಾನಗಲ್ ಕ್ಷೇತ್ರದಲ್ಲಿ ಬಹಳಷ್ಟು ನಮ್ಮ ಸಮಾಜದವರು ಇದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಮತದಾರರಿದ್ದಾರೆ. ಶ್ರೀ ನಿವಾಸ್ ಮಾನೆ ಮರಾಠ ಸಮುದಾಯದವರು, ಕಡಿಮೆ ಅಂದರು ಸುಮಾರು 2 ಸಾವಿರ ವೋಟ್ ಇರಬಹುದು, ಇರಲಿಕ್ಕನೂ ಇಲ್ಲ. ಆದರೆ ಜಾತಿ ಎಲ್ಲಿಯೂ ಕೆಲಸ ಮಾಡಲ್ಲ, ಇದನ್ನ ನಾವು ತಿಳಿದುಕೋಳ್ಳಬೇಕಾಗುತ್ತೆ. ಶಾಸಕ ಜನರ ಕಷ್ಟ ಸುಖದಲ್ಲಿ ಸ್ಪಂದಿಸಿದರೆ ಈ ರೀತಿ ರಿಸಲ್ಟ್ ಕೊಡತ್ತಾರೆ ಅನ್ನೋದಕ್ಕೆ ಒಂದು ಉದಾಹರಣೆ. ನಮ್ಮಂತ ರಾಜಕಾರಣಿಗಳು ಕಲಿಯಬೇಕಾಗಿದೆ. ಜಾತಿ ಹಣ ತೊಲ್ಬಲಕ್ಕಿಂತ ಜನರ ಮನಸ್ಸು ಗೆಲ್ಲೂ ಕೆಲಸ ಶ್ರೀನಿವಾಸ್ ಮಾನೆ ಮಾಡಿದ್ದಾರೆ. ಆ ರಿಸಲ್ಟ್ ಇವತ್ತು ನಮಗೆ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

Comments

Leave a Reply

Your email address will not be published. Required fields are marked *