ದೆಹಲಿ ಪ್ರವಾಸದಲ್ಲಿರೋ ಬೊಮ್ಮಾಯಿಗೆ ಸಂಪುಟ ಸಂಕಟ!

– ಮತ್ತೆ ಮಂತ್ರಿ ಸ್ಥಾನಕ್ಕಾಗಿ ಜಾರಕಿಹೊಳಿ ಒತ್ತಡ

ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಈಗ ಸಂಪುಟ ಸಂಕಟ ಶುರುವಾಗಿದೆ. ಸಂಪುಟ ವಿಸ್ತರಣೆಗಾಗಿ ಸಿಎಂ ಮೇಲೆ ಒತ್ತಡ ಹೆಚ್ಚಾಗ್ತಿದೆ. ಮತ್ತೆ ಮಂತ್ರಿ ಸ್ಥಾನ ನೀಡುವಂತೆ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಒತ್ತಡ ಹಾಕ್ತಿದ್ದಾರೆ.

ದೆಹಲಿಯಲ್ಲೂ ಸಿಎಂರನ್ನ ಭೇಟಿ ಆಗಿದ್ದಾರೆ. ಈ ನಡುವೆ ತಮ್ಮ ಪುತ್ರ ವಿಜಯೇಂದ್ರಗೆ ಮಂತ್ರಿ ಗಾದಿ ಕೊಡುವಂತೆ ಯಡಿಯೂರಪ್ಪ ಒತ್ತಡ ಹಾಕ್ತಿದ್ದಾರೆ. ನಮಗೂ ಸಚಿವ ಸ್ಥಾನ ಕೊಡಿ ಎಂದು ಆರ್ ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಪಟ್ಟು ಹಿಡಿದಿದ್ದಾರೆ. ದೆಹಲಿಯಲ್ಲಿರುವ ಸಿಎಂ ಬೊಮ್ಮಾಯಿ ದೆಹಲಿ ನಾಯಕರ ಭೇಟಿ ವೇಳೆ ಸಂಪುಟ ವಿಸ್ತರಣೆ ಅನಿವಾರ್ಯತೆಗೆ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಬಹುದು. ಇದನ್ನೂ ಓದಿ:  ನಮ್ಗೆ ಲಸಿಕೆ ಕೊಡ್ಬೇಡಿ, ನಮ್ಮ ಮೇಲೆ ದೇವರು ಬಂದಿದ್ದಾರೆ – ಯಾದಗಿರಿಯಲ್ಲಿ ಹೈಡ್ರಾಮಾ

ಖಾಲಿ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನಗಳ ಭರ್ತಿಗೆ ಅವಕಾಶ ಕೊಡಿ ಎಂದು ಕೇಳಬಹುದು. ನವೆಂಬರ್ ಅಥವಾ ಡಿಸೆಂಬರ್‍ಗೆ ಸಂಪುಟ ವಿಸ್ತರಣೆಗೆ ಸಿಎಂ ಬೊಮ್ಮಾಯಿ ಯೋಚಿಸ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದ್ರೆ ಇವತ್ತಿನ ಭೇಟಿಯಲ್ಲೇ ಹೈಕಮಾಂಡ್ ಒಪ್ಪಿಗೆ ಕೊಡುತ್ತಾ ಅಥವಾ ಆ ಬಗ್ಗೆ ಚರ್ಚಿಸಲು ಇನ್ನೊಂದು ಸಲ ದೆಹಲಿಗೆ ಬರುವಂತೆ ಸೂಚಿಸಬಹುದು.

Comments

Leave a Reply

Your email address will not be published. Required fields are marked *