ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಹಲ್ಲೆ

Tumkuru man

ತುಮಕೂರು: ಪ್ರೀತಿಸಿ ಮದುವೆಯಾಗಿದ್ದ ಎಂಬ ಕಾರಣಕ್ಕೆ ಯುವಕನ ಮೇಲೆ ಯುವತಿ ಮನೆ ಕಡೆಯವರು ಹಲ್ಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಡಿಎ ತಾಂಡಾದಲ್ಲಿ ನಡೆದಿದೆ.

Tumkuru man

ಹಲ್ಲೆಗೊಳಗಾದ ಯುವಕನನ್ನು ಸರ್ಜುನ್ ನಾಯ್ಕ್ ಎಂದು ಗುರುತಿಸಲಾಗಿದೆ. ಸರ್ಜುನ್ ನಾಯ್ಕ್ ಸುಮಾರು ಐದು ವರ್ಷಗಳಿಂದ ಪವಿತ್ರ ಬಾಯಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಕಳೆದ 8 ತಿಂಗಳ ಹಿಂದೆ ಓಡಿ ಹೋಗಿ ಪವಿತ್ರ ಬಾಯಿ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದರು. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು

Tumkuru man

ಇದರಿಂದ ಕೋಪಗೊಂಡಿದ್ದ ಪವಿತ್ರಾ ಬಾಯಿಯ ತಂದೆ ವೆಂಕಟೇಶ್ ನಾಯ್ಕ್, ದೊಡ್ಡಪ್ಪ ರಂಗನಾಯ್ಕ್, ಅಣ್ಣ ತಿಪ್ಪೇಶ್ ನಾಯ್ಕ್, ಅಕ್ಕ ಕಲಾವತಿ, ಅಣ್ಣ ರಾಮಾನಾಯ್ಕ್, ತಮ್ಮ ನವೀನ್ ನಾಯ್ಕ್‌ರಿಂದ ಸರ್ಜುನ್ ನಾಯ್ಕ್‌ಗೆ ದೊಣ್ಣೆಗಳಿಡಿದು ಹಿಗ್ಗಾಮುಗ್ಗಾ ತಳಿಸಿದ್ದಾರೆ. ಸದ್ಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಸುಮಾರು 8 ಜನರ ಮೇಲೆ ದೂರು ದಾಖಲಾಗಿದ್ದು, ಹಲ್ಲೆಗೊಳಗಾದ ಸರ್ಜುನ್ ನಾಯ್ಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್

Comments

Leave a Reply

Your email address will not be published. Required fields are marked *