ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

– ಸಂಬರ್ಗಿ ಅಲ್ಲ ಸಾಂಬಾರ್ ಕಾಗೆ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ, ಕನ್ನಡ ವಿರೋಧಿ. ರಾಜಕೀಯ ಕಾರಣಕ್ಕೆ ತಾಯಿಭಾಷೆ ಬಲಿಕೊಡುವ ನೆಲಹಿಡುಕ. ಬಿಜೆಪಿ ಪಕ್ಷ ಸೇರಲು ಪಡಬಾರದ ಪ್ರಚಾರದ ಗಿಮಿಕ್ ನಡೆಸುತ್ತಿರುವ ಓರ್ವ ನೆಲಹಿಡುಕ ಎಂದು ಬಿಗ್‍ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದಾರೆ.

ಪ್ರಶಾಂತ್ ಸಂಬರ್ಗಿ ವಿರುದ್ಧ ಫೇಸ್‍ಬುಕ್ ನಲ್ಲಿ ಬರೆದುಕೊಂಡು ಆರೋಪಗಳ ಸುರಿಮಳೆ ಗೈದಿರುವ ಚಂದ್ರಚೂಡ್, ಸಂಬರ್ಗಿಯ ಹೋರಾಟವೆಲ್ಲಾ ಸುಳ್ಳು. ಸಂಬರ್ಗಿ ಒಬ್ಬ ಮೋಸಗಾರ. ಯಾವುದೇ ಕೇಸ್ ಅಲ್ಲಿ ಕೂಡ ಸಂಬರ್ಗಿ ಸಾಕ್ಷ್ಯ ಕೊಟ್ಟಿಲ್ಲ. ಮೀಟೂ ಕೇಸ್ ಅಲ್ಲಿ ಕೋಟ್ಯಂತರ ಹಣ ಪಡೆದ, ಅರ್ಜುನ್ ಸರ್ಜಾ ಪರವಾಗಿ ಮಾತನಾಡಿದ. ಇದೂವರೆಗೂ ಒಂದೇ ಒಂದು ಸಾಕ್ಷ್ಯವನ್ನು ಕೊಟ್ಟಿಲ್ಲ. ರಾಗಿಣಿ, ಸಂಜನಾ, ಜಮೀರ್ ಅಹಮದ್ ವಿರುದ್ಧ ಮಾತನಾಡಿದ ಬಳಿಕ ಸಿಸಿಬಿಯ ಕಚೇರಿಯಲ್ಲಿ ಖಾಲಿ ಫೈಲ್ ಹಿಡ್ಕೊಂಡು ಓಡಾಡಿದ. ಇನ್ಸ್‍ಪೆಕ್ಟರ್, ಡಿಸಿಪಿ ಚೇಂಬರ್ ಗೆ ಹೋಗಿ ಕಾಲಹರಣ ಮಾಡಿ ಬಂದ ಅಷ್ಟೇ. ಸ್ನೇಹಿತನೊಬ್ಬನಿಗೆ ಕಾರು ಕೊಡ್ತಿಸ್ತೀನಿ ಅಂತ ತಾನೇ ಕಾರನ್ನು ಇಟ್ಟುಕೊಂಡು. ಬಳಿಕ ಕಾರು ತೆಗೆದುಕೊಳ್ಳಲು ಬಂದ ಸ್ನೇಹಿತನಿಗೆ ಮೋಸ ಮಾಡಿದ ಎಂದು ಸಂಬರ್ಗಿಯ ಇಡೀ ಚರಿತ್ರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಕ್ರವರ್ತಿ ಚಂದ್ರಚೂಡ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

ವಕೀಲ ಸೂರ್ಯ ಮುಕುಂದ್ ರಾಜ್ ಪೋಸ್ಟ್ ಗೆ ಸಂಬರ್ಗಿ ವಿರುದ್ಧ ಸಾಕಷ್ಟು ಬರೆದಿರೊ ಚಂದ್ರಚೂಡ್, ಸಾಂಬಾರ್ ಕಾಗೆ ಎಂಬ ದಲ್ಲಾಳಿಯ ಪುರಾಣ. ರಿಲಾಯನ್ಸ್ ಕಂಪನಿಯ ಮಾರ್ಕೆಟಿಂಗ್ ಬಾಯ್ ಅಂತಾ ಪೋಸ್ಟ್ ಹಾಕಿದ್ದ ವಕೀಲ ಸೂರ್ಯ ಮುಕುಂದ್ ರಾಜ್ ಪೋಸ್ಟ್ ಗೆ ಪುಟಗಟ್ಟಲೆ ಕಮೆಂಟ್ ಮಾಡಿರುವ ಚಂದ್ರಚೂಡ್, ಈ ಸಂಧರ್ಭಕ್ಕೆ ಇಂತಹದ್ದೊಂದು ವಿವರಣೆ ಬರೆಯದೆ ಹೋದರೆ ಕಲಿತ ಪತ್ರಿಕೋದ್ಯಮಕ್ಕೆ ಅಗೌರವ. ಸಿನಿಮಾ ಇಂಡಸ್ಟ್ರಿಗೂ ಅವನಿಗೂ ಏನು ಸಂಬಂಧ ಕಳಿಸ್ರೊ ಅವನನ್ನು ಹೊರಗೆ ಅಂತಾ ಅಂಬರೀಶ್ ಉಗಿದು ಕಳಿಸಿದ್ರು, ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಲು ಕ್ರೈಸ್ತ ಮಿಶನರಿ ಇಂದ ಹಣ ಬರ್ತಿತ್ತು. ಹಾಗಾಗಿ ಅವನು ಆರೋಪ ಮಾಡಿದ್ದ. ರೇಂಜ್ ರೋವರ್ ಕಾರ್ ಪಡೆದು ಸ್ನೇಹಿತನಿಗೆ ರಾತ್ರೋ ರಾತ್ರಿ ವಿಶ್ವಾಸ ದ್ರೋಹವೆಸಗಿದ ಆಸಾಮಿ ಅವನು ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ

ಕಂಡವರ ಬಗ್ಗೆ ಸುಳ್ಳು ಆಸ್ತಿಗಳನ್ನ ಕೇಳ್ತಾನೆ ರಾಗಿಣಿ, ಸಂಜನಾ, ಅನುಶ್ರೀ, ಜಮೀರ್ ಬಗ್ಗೆ ಈವರೆಗೆ ಈತ ಒಂದೇ ಒಂದು ಚೂರು ಮಾಹಿತಿ ಕೊಟ್ಟಿಲ್ಲ. ನಾಲ್ಕು ಬಾರಿ ಸಿಸಿಬಿಯ ಬಾತ್ ರೂಮ್ ಬಳಸಿ ಬಂದನೇ ಹೊರತು ಯಾವ ಸಣ್ಣ ಮಾಹಿತಿಯೂ ನೀಡಿಲ್ಲ. ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು, ಖ್ಯಾತ ಗಾಯಕ ರಘು ದೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ ಗಿಂಡಿಮಾಣಿ ಪ್ರಶಾಂತ್ ಸಂಬರ್ಗಿ ಎಂದು ಹಿಗ್ಗಾಮುಗ್ಗ ಜರಿದಿದ್ದಾರೆ.

 

 

Comments

Leave a Reply

Your email address will not be published. Required fields are marked *