ಜನರ ಬಳಿ ಸುಲಿಗೆ ಮಾಡ್ಕೊಂಡು ನಿಂತಿದ್ದೀರಾ?- ಅಧಿಕಾರಿಗಳಿಗೆ ರವೀಂದ್ರ ಶ್ರೀಕಂಠಯ್ಯ ಕ್ಲಾಸ್

ಮಂಡ್ಯ: ಜನರ ಬಳಿ ಸುಲಿಗೆ ಮಾಡಿಕೊಂಡು ನಿಂತಿದ್ದೀರಾ, ಸಂಬಳ ತಗೊಳ್ತೀರಾ ನಿಮಗೆ ಮಾನ ಮರ್ಯಾದೆ ಇಲ್ವಾ ಎಂದು ಸರ್ವೆ ಇಲಾಖೆ ಅಧಿಕಾರಿಗಳನ್ನು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸರ್ವೆ ಇಲಾಖೆಯಲ್ಲಿ ಜಮೀನು ಸ್ಕೆಚ್ ಇತರೆ ವಿಷಯಗಳಿಗೆ ತಿಂಗಳಗಟ್ಟಲೆ ಅಲೆಸುವ ಬಗ್ಗೆ ಅಧಿಕಾರಿಗಳ ವಿರುದ್ಧ ರವೀಂದ್ರ ಶ್ರೀಕಂಠಯ್ಯಗೆ ಹಲವು ದಿನಗಳಿಂದ ದೂರು ಕೇಳಿಬಂದಿತ್ತು. ಹೀಗಾಗಿ ರೈತರು ನೀಡಿದ ದೂರಿನ ಬಳಿಕ ಪರಿಶೀಲನೆಗೆ ರವೀಂದ್ರ ಶ್ರೀಕಂಠಯ್ಯ ಇಲಾಖೆಯ ಕಚೇರಿಗೆ ತೆರಳಿದ್ದರು. ಈ ವೇಳೆ ಜನರಿಗೆ ದಾಖಲಾತಿ ನೀಡದೆ ಶಿಥಿಲಗೊಂಡಿವೆ ಎಂದು ಸಿಬ್ಬಂದಿಯೊಬ್ಬರು ಉತ್ತರಿಸುತ್ತಿದ್ದ ಶಾಕರಿಗೆ ಉತ್ತರ ನೀಡುತ್ತಾರೆ. ಇದನ್ನೂ ಓದಿ:  ಹಾಗಲಕಾಯಿಂದ ಮಾಡಿ ರುಚಿಯಾದ ಪಲ್ಯ

ಉತ್ತರ ನೀಡಿದ ಸರ್ವೆ ಇಲಾಖೆ ಮೇಲ್ವಿಚಾರಕ ಸುರೇಶ್‍ಗೆ ರವೀಂದ್ರ ಶ್ರೀಕಂಠಯ್ಯ ಕ್ಲಾಸ್ ತೆಗೆದುಳ್ಳುತ್ತಾರೆ. ಸಂಬಳ ತಗೊಳ್ತೀರಾ ನಿಮಗೆ ಮಾನ ಮರ್ಯಾದೆ ಇಲ್ವ, ದಾಖಲೆಗಳನ್ನ ನೀವು ಕಳೆದುಕೊಂಡು ಜನರತ್ರ ಸುಲಿಗೆ ಮಾಡ್ತಿದ್ದೀರಾ. ಈ ವೇಳೆ ಸರ್ವೆ ಇಲಾಖೆ ಮೇಲಧಿಕಾರಿಗಳಿಗೂ ಫೋನ್ ಮೂಲಕ ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನಾನು ಫುಲ್ ಥ್ರಿಲ್ ಆಗಿದ್ದೇನೆ ಅಂದ್ರು ಡಿಂಪಲ್ ಕ್ವೀನ್ ರಚಿತಾ

ಜಿಲ್ಲಾ ಕೇಂದ್ರದಲ್ಲಿ ಕುಳಿತು ಝೂಮ್ ಮೀಟ್ ನಲ್ಲೇ ಕಾಲ ಕಳೆಯುತ್ತಿದ್ದೀರಾ..? ದರೋಡೆ ಮಾಡಲು ನಿಮ್ಮ ಸಿಬ್ಬಂದಿಯನ್ನ ಬಿಟ್ಟಿದ್ದೀರಾ..? ನಿಮ್ಮನ್ನ ಬೇರೆ ಕಾನೂನು ಮಾಡಿ ಅಂತಿದ್ದೀವಾ..? ಕಾನೂನು ಏನಿದೆ ಅದನ್ನೇ ಮಾಡಿ. ಸಿಬ್ಬಂದಿಯನ್ನ ದುಡ್ಡಿಗೆ ಬಿಟ್ಟು, ದಲ್ಲಾಳಿ ಮಾಡಿಕೊಂಡಿದ್ದೀರಾ ಎಂದು ಪ್ರಶ್ನೆಗಳ ಸುರಿಮಳೆಗೈದ್ರು. ಮೇಲ್ವಿಚಾರಕ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರವೀಂದ್ರ ಶ್ರೀಕಂಠಯ್ಯ ಗರಂ ಆದರು.

 

Comments

Leave a Reply

Your email address will not be published. Required fields are marked *