ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

ಪ್ರತಿ ದಿನ ದೊಡ್ಮನೆ ಮಂದಿಗೆ ಒಂದಲ್ಲ ಒಂದು ಟಾಸ್ಕ್ ನೀಡುವ ಬಿಗ್‍ಬಾಸ್ 15ನೇ ದಿನದಂದು ಚಿನ್ನದ ಮೊಟ್ಟೆ ಟಾಸ್ಕ್ ನೀಡಿದ್ದರು. ಈ ವೇಳೆ ಗೆದ್ದ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್‍ರವರಿಗೆ ಹೆಚ್ಚುವರಿಯಾಗಿ ಬಿಗ್‍ಬಾಸ್ ಒಂದು ಚಿನ್ನದ ಮೊಟ್ಟೆ ನೀಡಿ, ಅದನ್ನು ಮನೆಯ ಯಾವುದೇ ಸದಸ್ಯರ ತಲೆಯ ಮೇಲೆ ಹೊಡೆದರೆ ಆ ಸದಸ್ಯರ ಲಾಕರ್‍ನಲ್ಲಿರುವ ಹಣ ಮೊಟ್ಟೆ ಹೊಡೆದವರ ಪಾಲಾಗುತ್ತದೆ ಎಂದು ಸೂಚಿಸಿದ್ದರು.

ಹೀಗಾಗಿ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್ ಮನೆಯ ಇತರ ಸದಸ್ಯರಿಗೆ ಮೊಟ್ಟೆ ಹೊಡೆಯಲು ಪ್ಲಾನ್ ಮಾಡುತ್ತಾರೆ. ಈ ವೇಳೆ ವೈಷ್ಣವಿ, ಶುಭಾ, ಪ್ರಿಯಾಂಕ್ ಬಾತ್ ರೂಮ್‍ನಲ್ಲಿ ಅವಿತುಕೊಂಡಿರುತ್ತಾರೆ. ನಂತರ ಬಾತ್ ರೂಮ್ ಬಾಗಿಲು ತೆಗೆದುಕೊಂಡಿದ್ದ ಪ್ರಿಯಾಂಕರ ಬೆನ್ನ ಹಿಂದೆ ಶಮಂತ್ ಬೀಳುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಸ್ವಿಮಿಂಗ್ ಪೂಲ್‍ಗೆ ಬಿದ್ದ ಪ್ರಿಯಾಂಕರನ್ನು ಅಟ್ಟಾಡಿಸಿಕೊಂಡು ದಿವ್ಯಾ ಸುರೇಶ್ ಮೊಟ್ಟೆ ಹೊಡೆಯುತ್ತಾರೆ. ಈ ವೇಳೆ ರೊಚ್ಚಿಗೆದ್ದ ಪ್ರಿಯಾಂಕ ದಿವ್ಯಾ ಸುರೇಶ್ ಬೆನ್ನ ಮೇಲೆ ಹೊಡೆಯುತ್ತಾರೆ. ಇದಕ್ಕೆ ದಿವ್ಯಾ ಸುರೇಶ್ ನನಗೆ ಯಾಕೆ ಹೊಡೆದೆ ಎಂದು ಪ್ರಶ್ನಿಸಿದಾಗ, ನೀನು ಏನು ಮಾಡಿದ್ದು ಎಂದು ಪ್ರಿಯಾಂಕ ತಿಮ್ಮೇಶ್ ಕಿಡಿಕಾರಿದ್ದಾರೆ.

ನಂತರ ಬಿಗ್‍ಬಾಸ್ ನೀರಿನಲ್ಲಿದ್ದಾಗ ಹೊಡೆದಿದ್ದಾರೆ ಎಂದು ಹೇಳುತ್ತಾ ಮನೆಯ ಒಳಗೆ ಸಿಟ್ಟಿನಿಂದ ಹೋಗಿ ಪ್ರಿಯಾಂಕ ತಿಮ್ಮೇಶ್ ದಿವ್ಯಾ ಸುರೇಶ್ ಪೆಟ್ಟಿಗೆಯಲ್ಲಿದ್ದ ಹಣವನ್ನು ಹಾಳು ಮಾಡುತ್ತಾರೆ. ಬಳಿಕ ಸ್ವಿಮಿಂಗ್ ಪೂಲ್‍ಗೆ ಮತ್ತೆ ಇಳಿದ ಪ್ರಿಯಾಂಕ ಮೊಟ್ಟೆ ಹೊಡೆಯುವುದು ದೊಡ್ಡ ವಿಚಾರವಲ್ಲ. ನನಗೆ ಪೆಟ್ಟಾಗುವುದು ಇರುತ್ತದೆ. ಪರಾಚುವುದು ಇರುತ್ತದೆ ಎಂದು ಶಮಂತ್‍ಗೆ ಹೇಳುತ್ತಿರುತ್ತಾರೆ. ಈ ವೇಳೆ ನಾನು ಅವನಿಗೆ ಮೊಟ್ಟೆ ಹೊಡೆಯಲು ಹೇಳಿದೆ ಎಂದು ಚಕ್ರವರ್ತಿಯವರು ಮಧ್ಯೆ ಮಾತನಾಡಿದಾಗ, ನಾನು ಶಮಂತ್ ಹತ್ತಿರ ಮಾತಾಡುತ್ತಿದ್ದೇನೆ ನಿಮ್ಮ ಹತ್ತಿರ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ನಾನು ಶಮಂತ್ ಹತ್ತಿರನೇ ಹೇಳುತ್ತಿದ್ದೇನೆ ಎಂದು ಚಕ್ರವರ್ತಿ ಹೇಳುತ್ತಾರೆ.

ಇದಕ್ಕೆ ಹೇ.. ಎಂದು, ನೀವೇಕೆ ಮಾತನಾಡುತ್ತಿದೀರಾ ಸುಮ್ಮನೆ ಎಂದು ಪ್ರಿಯಾಂಕ ಚಕ್ರವರ್ತಿ ವಿರುದ್ಧ ಹರಿಹಾಯ್ದಿದ್ದಾರೆ. ಆಗ ಚಕ್ರರ್ತಿಯವರು ನಾನು ನಿನ್ನ ಹತ್ತಿರ ಮಾತನ್ನೇ ಆಡುತ್ತಿಲ್ಲ. ಕಿರುಚಾಡ ಬೇಡ. ನಾನು ಶಮಂತ್ ಹತ್ತಿರ, ಮೊಟ್ಟೆ ಇರುವವರ ಹತ್ತಿರ ಹೇಳುತ್ತಿದ್ದೇನೆ, ನಿನ್ನ ಬಳಿ ಮಾತನಾಡುತ್ತಲೇ ಇಲ್ಲ. ಕೂಗಾಡಿ ಸೀನ್ ಕ್ರಿಯೆಟ್ ಮಾಡಬೇಡ. ನನಗೂ ನಿನಗೂ ವಿಷಯವೇ ಇಲ್ಲ. ನೀನು ಏನಾದರೂ ಮಾಡಿಕೋ, ಕಿರುಚಿಕೋ, ನನ್ನ ಈ ವಿಚಾರಕ್ಕೆ ಎಳೆಯಬೇಡ, ತೆಗೆದುಕೊಂಡರೆ ಕೆಟ್ಟದಾಗಿ ಮಾತನಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:ಆಲೂಗಡ್ಡೆಯಿಂದ ತಯಾರಿಸಿ ರುಚಿಯಾದ ಬೆಳಗ್ಗಿನ ಟಿಫನ್

Comments

Leave a Reply

Your email address will not be published. Required fields are marked *