ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

– ಗ್ರಾಮಸ್ಥರಿಗೆ ನದಿ ಹತ್ತಿರಕ್ಕೆ ತೆರಳದಂತೆ ಎಚ್ಚರಿಕೆ

ಯಾದಗಿರಿ: ಒಳ ಹರಿಯುವ ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿಯಿಂದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ನೀರು ಬಿಡುಗಡೆ ಮಾಡಿರುವುದರಿಂದ ನದಿ ಪಾತ್ರದ ಗ್ರಾಮಸ್ಥರಿಗೆ ನದಿ ಹತ್ತಿರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.

ಯಾದಗಿರಿ ಜಿಲ್ಲೆಯ ನಾರಾಯಣಪುರ ಗ್ರಾಮದ ಬಳಿ ಇರುವ ಬಸವಸಾಗರ ಜಲಾಶಯ ಇದಾಗಿದೆ. ಜಲಾಶಯದ ಒಟ್ಟು ಸಾಮರ್ಥ್ಯ 33.33 TMC, 492.25 ಮೀ ಇದ್ದು, ಇಂದಿನ ನೀರಿನ ಸಂಗ್ರಹ 21.38 TMC 400.37 ಮೀ ಇದೆ. ಒಳಹರಿವು 10,000 ಕ್ಯೂಸೆಕ್ ಇದ್ದರೆ, ಹೊರಹರಿವು ಸಹ ಕ್ಯೂಸೆಕ್ 10,000 ಕ್ಯೂಸೆಕ್ ಇದೆ.

Comments

Leave a Reply

Your email address will not be published. Required fields are marked *