ಲಸಿಕೆ ಪಡೆದ್ರೆ ಬದೋಕಲ್ಲಾ ಸಾಯೋದೆ ಇದೆ – ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದ

ಬೀದರ್ : ಲಸಿಕೆ ಪಡೆದರೆ ಬದುಕಲ್ಲ ಸಾಯೋದೆ ಇದೆ ಎಂದು ಅಧಿಕಾರಿಗಳ ಜೊತೆ ಮಹಿಳೆ ವಾಗ್ವಾದಕ್ಕೆ ಇಳಿದ ಘಟನೆ ಬೀದರ್ ನಲ್ಲಿ ನಡೆದಿದೆ.

ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪ್ರತಿಯೊಬ್ಬರು ಕೋವಿಡ್-19 ಲಸಿಕೆ ಪಡೆಯಬೇಕೆಂದು ಸರ್ಕಾರ ಘೋಷಿಸಿದೆ. ಆದರೆ ಲಸಿಕೆ ಪಡೆದರೆ ಅಡ್ಡ ಪರಿಣಾಮಗಳಾಗುತ್ತೆ ಎಂಬ ವದಂತಿಗಳಿರುವ ಹಿನ್ನೆಲೆ ಮಹಿಳೆಯೊಬ್ಬರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ್ ಕೆ ಗ್ರಾಮದ ಭಾಗಮ್ಮ(55) ಎಂಬ ಮಹಿಳೆ ಲಸಿಕೆ ಪಡೆಯಲು ಸತಾಯಿಸಿದ್ದಾರೆ. ಲಸಿಕೆ ಪಡೆದುಕೊಳ್ಳಿ ಎಂದು ತಾಲೂಕು ಕಾರ್ಯನಿರ್ವಹಕ ಅಧಿಕಾರಿ, ತಹಶಿಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಎಷ್ಟೇ ಮನವೊಲಿಸಿದ್ರು ಯಾವುದೇ ಪ್ರಯೋಜವಾಗಲಿಲ್ಲ. ನಾನು ಲಸಿಕೆ ಪಡೆಯಲ್ಲಾ, ನನ್ನ ಸಾಯಿಸಿ ಹಾಕರೀ, ನಾವು ದುಡಿದು ತಿನ್ನೋದಕ್ಕೆ ಇದ್ದೇವೆ. ಲಸಿಕೆ ಪಡೆದರೆ ಬದೋಕಲ್ಲಾ ಸಾಯೋದೆ ಇದೆ ಎಂದು ಮಹಿಳೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಈಗಾಗಲೇ ಭಾಲ್ಕಿ ತಾಲೂಕಿನ ಉಚ್ಛಾ ಗ್ರಾಮ ನೂರಕ್ಕೆ ನೂರು ಮಂದಿ ಲಸಿಕೆ ಪಡೆದು ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ಮಾದರಿಯಾಗಿದೆ. ಆದರೆ ಪಕ್ಕದಲ್ಲೇ ಇರುವ ತಳವಾಡ ಕೆ ಗ್ರಾಮದ ಮಹಿಳೆ ಅಧಿಕಾರಿಗಳು ಎಷ್ಟೇ ಮನವೊಲಿಸಿದ್ರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಇದನ್ನು ಓದಿ:ಬೆಂಗಳೂರಿನಲ್ಲಿ ಒಂದಂಕಿಗೆ ಇಳಿದ ವಲಯವಾರು ಪಾಸಿಟಿವಿಟಿ ರೇಟ್

ಕೊರೊನಾ ಮಹಾಮಾರಿಗೆ ರಾಮ ಬಾಣ ಅಂದರೆ ಅದು ಸಂಜೀವಿನಿ ಲಸಿಕೆ. ಆದರೆ ಈ ಸಂಜೀವಿನಿ ಲಸಿಕೆ ಪಡೆಯಲು ತಪ್ಪು ವದಂತಿಗಳಿಂದ ಹಲವಾರು ಹಿಂದೇಟು ಹಾಕುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

Comments

Leave a Reply

Your email address will not be published. Required fields are marked *