ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ ಇಟ್ಟು ಪೂಜೆ- ಗ್ರಾಮಸ್ಥರಲ್ಲಿ ಆತಂಕ

ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಬಳಿ ರಸ್ತೆ ಪಕ್ಕದ ಮರದವೊಂದರ ಕೆಳಗಿರೋ ಪೂಜಾ ಸಾಮಗ್ರಿಗಳನ್ನ ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾದ ಘಟನೆ ನಡೆದಿದೆ.

ಕರ್ಜಗಿ ಗ್ರಾಮದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಕಟ್ಟಿಗೆಯ ದೇವಿ ವಿಗ್ರಹ, ಬಳೆ, ಬಾಳೆ ಹಣ್ಣು, ತಾಳಿ, ಎಳೆನೀರು, ನೂರಾರು ಮರಗಳು, ಮಡಿಕೆಗಳು ಸೇರಿದಂತೆ ಪೂಜೆ ಸಾಮಾಗ್ರಿಗಳನ್ನ ಇಟ್ಟು ಹೋಗಿದ್ದಾರೆ. ಅಕ್ಕಪಕ್ಕದ ಜಮೀನುಗಳ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಗಡಿ ದುರಗಮ್ಮನೋ ಅಥವಾ ಯಾರಾದರೂ ವಾಮಾಚಾರವೋ ಮಾಡಿದ್ದರ ಎಂಬುವುದು ಗೊತ್ತಾಗುತ್ತಿಲ್ಲ. ಗ್ರಾಮಸ್ಥರಲ್ಲಿ ಆತಂಕವನ್ನ ಉಂಟುಮಾಡಿದೆ. ಊರಿನ ಹಿರಿಯರ ಜೊತೆ ಚರ್ಚಿಸಿ ವಸ್ತುಗಳನ್ನ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ. ಗಡಿ ದುರಗಮ್ಮದೇವಿ ಆಗಿದ್ದರೆ ಕಡಿಮೆ ವಸ್ತುಗಳನ್ನ ಇಟ್ಟು ಪೂಜೆ ಮಾಡುತ್ತಿದ್ದರು. ಈಗ ಹೆಚ್ಚು ಪೂಜಾ ಸಾಮಗ್ರಿಗಳನ್ನ ಇಟ್ಟು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ ಅಂತಾರೆ ಗ್ರಾಮಸ್ಥರು.

ಗ್ರಾಮದ ಹಿರಿಯ ಜೊತೆಗೆ ಮಾತನಾಡಿ ಪೂಜಾ ಹಾಗೂ ದೇವಿಯನ್ನ ನದಿಯಲ್ಲಿ ಬಿಡಬೇಕು. ಅಥವಾ ನಾವು ಗಡಿಯಲ್ಲಿ ಪೂಜೆ ಮಾಡಿ ಅಲ್ಲಿಯೇ ಮುಚ್ಚಬೇಕು ಅನ್ನೋದನ್ನ ತೀರ್ಮಾನ ಮಾಡುತ್ತೆವೆ ಅಂತಾರೆ ಗ್ರಾಮದ ಅಕ್ಕಪಕ್ಕದ ಜಮೀನಿನ ರೈತರು ಹಾಗೂ ಗ್ರಾಮಸ್ಥರು.

Comments

Leave a Reply

Your email address will not be published. Required fields are marked *