ಬಿಗ್ ಬಿಯಿಂದ ಕೋವಿಡ್ ಕೇಂದ್ರಕ್ಕೆ 2 ಕೋಟಿ ನೆರವು

ನವದೆಹಲಿ: ದೆಹಲಿಯ ರಾಕಾಬ್ ಗಂಜ್ ಗುರುದ್ವಾರದಲ್ಲಿ ಸೋಮವಾರ ಉದ್ಘಾಟಿಸಲಾಗುತ್ತಿರುವ ಕೋವಿಡ್-ಕೇರ್ ಸೌಲಭ್ಯಗಳಿಗಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ 2 ಕೋಟಿ ನೆರವು ನೀಡಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಜೀಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್ ಕೇರ್ ಸೌಲಭ್ಯಕ್ಕಾಗಿ 2 ಕೋಟಿ ನೀಡಿರುವದಕ್ಕೆ ಧನ್ಯವಾದಗಳು. ಅವರ ಸೇವೆಗೆ ಸೆಲ್ಯೂಟ್ ಎಂದು ಅಕಾಲಿ ದಳ ಪಕ್ಷದ ರಾಷ್ಟ್ರೀಯ ವಕ್ತಾರ ಶ್ರೀ ಸಿರ್ಸಾರವರು ಹೇಳಿದ್ದಾರೆ.

ಜೊತೆಗೆ ವಿದೇಶದಿಂದ ಆಕ್ಸಿಜನ್ ಸಿಲಿಂಡರ್‍ಗಳನ್ನು ಕೋವಿಡ್ ಕೇರ್ ಸೆಂಟರ್‍ಗೆ ತಲುಪಿಸುವುದಾಗಿ ಅಮಿತಾಬ್ ಬಚ್ಚನ್‍ರವರು ನುಡಿದಿರುವುದಾಗಿ ಶ್ರೀ ಸಿರ್ಸಾರವರು ತಿಳಿಸಿದ್ದಾರೆ.

ದೆಹಲಿಯಲ್ಲಿ ಆಕ್ಸಿಜನ್‍ಗಾಗಿ ಹೋರಾಡುತ್ತಿರು ವೇಳೆ ಅಮಿತಾಬ್ ಬಚ್ಚನ್‍ರವರು ನನ್ನ ಕರೆದು ಈ ಬಗ್ಗೆ ವಿಚಾರಿಸಿದರು. ಸದ್ಯ ರಕಾಬ್ ಗಂಜ್ ಗುರುದ್ವಾರವನ್ನು ಸೋಮವಾರ ಉದ್ಘಾಟಿಸಲಾಗುತ್ತಿದ್ದು, 300 ಬೆಡ್, ಆಕ್ಸಿಜನ್ ಸಿಲಿಂಡರ್, ವೈದ್ಯರು ಮತ್ತು ಅಂಬ್ಯುಲೆನ್ಸ್ ಸೇವೆಗಳನ್ನು ಉಚಿತವಾಗಿ ಒದಗಿಸುವುದಾಗಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *