ಕೈ ಮುಗಿಯುತ್ತೇನೆ ಮಾಸ್ಕ್ ಹಾಕಿಕೊಳ್ಳಿ, ಜೀವದ ಜೊತೆ ಹೋರಾಡಬೇಕಿದೆ- ರೇಣುಕಾಚಾರ್ಯ ಮನವಿ

– ಬೆಳ್ಳಂ ಬೆಳಗ್ಗೆ ರೇಣುಕಾಚಾರ್ಯ ಎಪಿಎಂಸಿಗೆ ಭೇಟಿ, ಮಾಸ್ಕ್ ಹಾಕಿಕೊಳ್ಳದವರಿಗೆ ಫುಲ್ ಕ್ಲಾಸ್

ದಾವಣಗೆರೆ: ಶಾಸಕ ರೇಣುಕಾಚಾರ್ಯ ಹೊನ್ನಾಳಿಯ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಮಾಸ್ಕ್ ಹಾಕಿಕೊಳ್ಳದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಮಾಸ್ಕ್ ಹಾಕಿಕೊಳ್ಳುವಂತೆ ಜಾಗೃತಿ ಮೂಡಿಸಿದ್ದಾರೆ.

ಹೊನ್ನಾಳಿಯ ಎಪಿಎಂಸಿಗೆ ಭೇಟಿ ನೀಡಿದ ಅವರು, ದಯವಿಟ್ಟು ಮಾಸಕ್ ಹಾಕಿಕೊಳ್ಳಿ, ಮೊನ್ನೆ ಸಾರ್ವಜನಿಕರೊಬ್ಬರು ಬೆಡ್ ಸಿಗುತ್ತಿಲ್ಲ ಎಂದು ಕರೆ ಮಾಡಿದ್ದರು. ಅವರಿಗೆ ಫುಲ್ ಸೀರಿಯಸ್ ಆಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾವು ಎಷ್ಟು ಮನವಿ ಮಾಡಿದರೂ ಬೆಡ್ ಸಿಗುತ್ತಿಲ್ಲ. ಪರಿಸ್ಥಿತಿ ಗೊತ್ತಿದ್ದು, ಮಾಸ್ಕ್ ಹಾಕುವುದಿಲ್ಲ ಎಂದರೆ ಮಾರ್ಕೆಟ್ ಕ್ಲೋಸ್ ಮಾಡಿಸುತ್ತೇನೆ ಎಂದು ತರಕಾರಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ತರಕಾರಿ ಮಾರುಕಟ್ಟೆಯಲ್ಲಿ ಹಲವು ಜನ ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಮರೆತಿದ್ದರು. ಹೀಗಾಗಿ ವ್ಯಪಾರಿಗಳು ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ಹೇಳಿದ್ದಾರೆ. ಜನರಿಗೆ ಜಾಗೃತಿ ಮೂಡಿಸಿ, ವರ್ತಕರಿಗೆ ಸುರಕ್ಷಿತವಾಗಿ ವ್ಯಾಪಾರ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಮಾಸ್ಕ್, ಸಾಮಾಜಿಕ ಅಂತರ ಕಾಪಾಡದಿದ್ದರೆ ಮಾರುಕಟ್ಟೆ ಬಂದ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿ ಪಾಲಿಸಬೇಕು. ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *