ಕೊರೊನಾ ಸೋಂಕಿತನನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಸಚಿವ!

ಭುವನೇಶ್ವರ್: ಮಹಾಮಾರಿ ಕೊರೊನಾದಿಂದ ಅವಾಂತರಗಳು ಸೃಷ್ಟಿಯಾಗುತ್ತಿರುವುದು ಅಷ್ಟಿಷ್ಟಲ್ಲ. ಒಂದೆಡೆ ಬೆಡ್ ಇಲ್ಲದೆ ಪರದಾಡುತ್ತಿದ್ದರೆ, ಇನ್ನೊಂದೆಡೆ ಆಕ್ಸಿಜನ್ ಇಲ್ಲದೆ ಜನ ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ಇದೀಗ ಒಡಿಶಾದ ಸಚಿವರೊಬ್ಬರು ಸ್ವತಃ ತಾವೇ ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಘಟನೆಯೊಂದು ನಡೆದಿದೆ.

ಹೌದು. ಸಚಿವ ಸುಶಾಂತ್ ಸಿಂಗ್ ಅವರು ಸ್ವತಃ ತಾವೇ ಅಂಬುಲೆನ್ಸ್ ಚಾಲನೆ ಮಾಡಿಕೊಂಡು ಸೋಂಕಿತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಬರ್ಗಾರ್ಹ್ ಜಿಲ್ಲೆಯ ತಬದಾ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಯುವಕನೊಬ್ಬನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಅಲ್ಲದೆ ಆತನಿಗೆ ಕೂಡಲೇ ಚಿಕಿತ್ಸೆಯ ಅಗತ್ಯತೆ ಇತ್ತು. ಹೀಗಾಗಿ ಸಚಿವರೇ ಸ್ಥಳಕ್ಕೆ ತೆರಳಿ ತಾವೇ ಅಂಬುಲೆನ್ಸ್ ಚಾಲನೆ ಮಾಡುವ ಮೂಲಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸುಶಾಂತ್ ಸಿಂಗ್ ಅವರು ಭಟ್ಲಿ ಕ್ಷೇತ್ರದ ಶಾಸಕರಾಗಿದ್ದಾರೆ. ಅಲ್ಲದೆ ರಾಜ್ಯ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *