ನಿಮ್ಮ ವಿಶೇಷ ಕಾಳಜಿ, ಪ್ರೀತಿಗೆ ಧನ್ಯವಾದ: ಸುದೀಪ್

ಬೆಂಗಳೂರು: ಕೆಲವು ದಿನಗಳಿಂದ ಅನಾರೋೀಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ಸುಧಾರಿಸಿಕೊಂಡಿದ್ದಾರೆ. ಸದ್ಯ ಈ ವೇಳೆ ವಿಶೇಷ ಕಾಳಜಿ ತೋರಿಸಿದ ಚಂದನವನದ ನಟರಿಗೆ ಟ್ವೀಟ್ ಮಾಡುವ ಮೂಲಕ ಕಿಚ್ಚ ಧನ್ಯವಾದ ತಿಳಿಸಿದ್ದಾರೆ.

ನಟ ಕಿಚ್ಚ ಸುದೀಪ್ ಅನಾರೋಗ್ಯದ ಕಾರಣ ಕೆಲವು ದಿನಗಳಿಂದ ಹೊರಗಡೆ ಕಾಣಿಸಿಕೊಂಡಿಲ್ಲ. ಕಿಚ್ಚನ ಅನಾರೋಗ್ಯದ ಸಮಯದಲ್ಲಿ ವಿಶೇಷ ಕಾಳಜಿ ತೋರಿಸುವ ಮೂಲಕ ವೈಯಕ್ತಿಕವಾಗಿ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸಿಂಪಲ್ ಸ್ಟಾಋ ನಟ ರಿಷಬ್ ಶೆಟ್ಟಿ ಹೆಸರನ್ನು ಸೂಚಿಸಿ ಧನ್ಯವಾದ ಹೇಳಿದ್ದಾರೆ.

ಉಪೆಂದ್ರ, ಶಿವಣ್ಣ, ರವಿಚಂದ್ರನ್ ಮತ್ತು ರಿಷಬ್ ಶೆಟ್ಟಿ ಅವರು ಫೋನ್ ಮೂಲಕ ಕರೆ ಮಾಡಿ ಆರೋಗ್ಯ ವಿಚಾರಿಸಿ, ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿಸಿದಕ್ಕೆ ಧನ್ಯವಾದಗಳು. ಪ್ರೀತಿ, ಕಾಳಜಿ ಜೊತೆಗೆ ಉತ್ಸಾಹ ತುಂಬಿದ ಕೆಲವು ಸ್ನೇಹಿತರಿಗೆ ಮತ್ತು ಚಿತ್ರರಂಗದ ನನ್ನ ಸಹೋದ್ಯೋಗಿಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಈ ಮುನ್ನ ವಾರಾಂತ್ಯದಲ್ಲಿ ಬಿಗ್‍ಬಾಸ್ ರಿಯಾಲಿಟಿ ಶೋನ ವಾರದ ಕಥೆಯಲ್ಲಿ ಕಿಚ್ಚ ಪಾಲ್ಗೊಳ್ಳುವುದಾಗಿ ಟ್ವೀಟ್ ಮಾಡಿ ತಿಳಿಸಿದ್ದರು. ಆದರೆ ಕೋವಿಡ್ ನಿಯಮದ ಪ್ರಕಾರ ಚಿತ್ರೀಕರಣ ಮಾಡಲು ಸಾಧ್ಯವಾಗದ ಕಾರಣ ಈ ವೀಕೆಂಡ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

Comments

Leave a Reply

Your email address will not be published. Required fields are marked *