ಇಂದು ಶ್ರೀ ರಾಮ ನವಮಿ ಹಬ್ಬ – ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ

ನವದೆಹಲಿ: ಇಂದು ಶ್ರೀ ರಾಮ ನವಮಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಜನತೆಗೆ ಶುಭ ಕೋರಿದ್ದಾರೆ.

ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದೇವರು ಶ್ರೀ ರಾಮನ ಆಶೀರ್ವಾದ ಯಾವಾಗಲೂ ಭಾರತ ದೇಶದ ಜನತೆಯ ಮೇಲೆ ಇರುತ್ತದೆ ಎಂದು ತಿಳಿಸಿದ್ದಾರೆ.

ರಾಮನ ಜನ್ಮ ದಿನವನ್ನು ಭಾರತದ ಜನತೆ ರಾಮನವಮಿ ಎಂದು ಇಂದು ಆಚರಿಸುತ್ತಾರೆ. ಶ್ರೀ ರಾಮನವಮಿ ಒಂಬತ್ತು ದಿನಗಳ ಚೈತ್ರ ನವರಾತ್ರಿ ಅಥವಾ ವಸಂತ ನವರಾತ್ರಿಯ ಅಂತ್ಯವನ್ನು ಸೂಚಿಸುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯೆ ಇದು ಆಚರಿಸುತ್ತಿರುವ ಎರಡನೇ ಶ್ರೀ ರಾಮನವಮಿ ಹಬ್ಬವಾಗಿದೆ.

ರಾಷ್ಟ್ರಾದ್ಯಂತ ಕೋವಿಡ್-19 ಬಿಕ್ಕಟ್ಟಿನ ಮಧ್ಯೆ ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ಅಗತ್ಯವಿದ್ದರೆ ಮಾತ್ರ ಹೊರಗಡೆ ಹೋಗಬೇಕು. ಇಂದಿನ ಬಿಕ್ಕಟ್ಟನ್ನು ಪರಿಹರಿಸಲು ರಾಷ್ಟ್ರವು ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಮಾರಿಯಾದ ಪುರುಷ ಶ್ರೀ ರಾಮ ಅವರ ಸಂದೇಶವನ್ನು ನಾವು ಶಿಸ್ತುಬದ್ಧವಾಗಿ ಪಾಲಿಸಬೇಕು. ಇದು ರಂಜಾನ್ 7ನೇ ದಿನವೂ ಆಗಿದೆ. ಹಬ್ಬವು ನಮಗೆ ತಾಳ್ಮೆ ಮತ್ತು ಶಿಸ್ತು ಕಲಿಸುತ್ತದೆ. ಕೋವಿಡ್ ವಿರುದ್ಧ ಹೋರಾಡಲು ನಮಗೆ ತಾಳ್ಮೆ ಹಾಗೂ ಶಿಸ್ತು ಎರಡು ಬಹಳ ಮುಖ್ಯ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *