ಮನೆಯ ಎಲ್ಲಾ ಸ್ಪರ್ಧಿಗಳಿಗಿಂತಲೂ ನಿಧಿಗೆ ಸಿಕ್ತು ಹೆಚ್ಚು ಅಂಕ

ಷ್ಟು ದಿನ ಕೇವಲ 17 ಮಂದಿ ಸ್ಪರ್ಧಿಗಳು ಎಂದು ಭಾವಿಸಿದ್ದ ದೊಡ್ಮನೆ ಸದಸ್ಯರಿಗೆ, ಇದೀಗ ಬಿಗ್‍ಬಾಸ್ ವೈಲ್ಡ್‍ಕಾರ್ಡ್ ಸ್ಪರ್ಧಿಯನ್ನು ಕಳುಹಿಸುವ ಮೂಲಕ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ.

ಪತ್ರಕರ್ತ, ಸಿನಿಮಾ ನಿರ್ದೇಶಕ ಚಂದ್ರಚೂಡ ಚಕ್ರವರ್ತಿ ನಿನ್ನೆ ಬಿಗ್‍ಬಾಸ್ ಮನೆಗೆ ವೈಲ್ಡ್‍ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಮನೆ ಸದಸ್ಯರ ಹಾವ-ಭಾವ, ಅಭ್ಯಾಸ, ವರ್ತನೆ ಬಗ್ಗೆ ಅಳೆದು ಸುರಿದು ಅಂಕಗಳನ್ನು ನೀಡಿದ್ದಾರೆ.

ಮೊದಲಿಗೆ ಮನೆಯವರೊಂದಿಗೆ ತಮ್ಮ ಪರಿಚಯ ಮಾಡಿಕೊಂಡ ಚಂದ್ರಚೂಡರವರು, ಬಳಿಕ ಮನೆಯ ಸದಸ್ಯರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ ಅಂಕಗಳನ್ನು ನೀಡಿದರು. ಈ ವೇಳೆ ಮನೆಯ ಎಲ್ಲ ಸದಸ್ಯರಿಗಿಂತಲೂ ನಿಧಿ ಸುಬ್ಬಯ್ಯರಿಗೆ 10ಕ್ಕೆ 6 ಅಂಕಗಳನ್ನು ನೀಡಿದರು.

ಮನುಷ್ಯ ಸಂದರ್ಭ ಬಂದಾಗ ತನ್ನ ನೋವನ್ನು ಹೇಳಿಕೊಂಡು ಬಿಡುತ್ತಾನೆ. ಇದು ಕನಿಷ್ಟ ಮನುಷ್ಯನ ಗುಣ. ಮನುಷ್ಯನ ಮೂಲ ಗುಣ ನಮ್ಮೊಳಗಿರುವ ನೋವು ಹಾಗೂ ಪ್ರೀತಿಯನ್ನು ಯಾರೊಂದಿಗದರೂ ಹಂಚಿಕೊಳ್ಳಬೇಕು. ಇಲ್ಲಿಯವರೆಗೂ ನಿಧಿ ಒಂದೇ ಒಂದು ಕ್ಷಣ ನೋವಿನ ಮುಖವನ್ನು ನಮ್ಮೊಂದಿಗೆ ತೋರಿಸಿಕೊಂಡಿಲ್ಲ. ಆದರೆ ಅವರ ನೋವು ಏನೆಂಬುವುದು ನನಗೆ ಗೊತ್ತು. ಯಾರನ್ನು ತೋಳಿಗೆ ಸೇರಿಸದೇ.. ಯಾವುದೇ ತೋಳದಲ್ಲಿ, ತೋಳದ ಗುಂಪಿನ ಹಿಂಡಿನಲ್ಲಿ ಒಂದಾಗದೇ.. ಯಾರನ್ನು ಭಾವಬಂಧನಕ್ಕೆ ಒಂದಾಗದೇ.. ಯಾರಿಗೂ ಬಾಹುವನ್ನು ಕೊಡದೇ ತನ್ನಷ್ಟಕ್ಕೆ ತಾನು ತಬ್ಬಿಕೊಂಡಿರುವುದಕ್ಕೆ ಮರಕ್ಕೆ ಮಾತ್ರ ಸಾಧ್ಯ. ಅದೊಂದು ಗುಣಕ್ಕೆ ನಾನು ನಿಧಿ ಸುಬ್ಬಯ್ಯರವರಿಗೆ ಅತೀ ಹೆಚ್ಚು ಅಂಕ ನೀಡುತ್ತೇನೆ ಎಂದು ಹೇಳುತ್ತಾರೆ.

ಮನೆಯ ಮತ್ತಿತ್ತರ ಸದಸ್ಯರಾದ ರಾಜೀವ್ 1, ಶಂಕರ್ 0, ಮಂಜು 2, ವಿಶ್ವನಾಥ್ ಅರ್ಧ, ಶುಭ ಪೂಂಜಾ 2, ಅರವಿಂದ್ 3, ಶಮಂತ್ ಅರ್ಧ, ದಿವ್ಯಾ ಉರುಡುಗ 2, ವೈಷ್ಣವಿ 3 ಹೀಗೆ ಎಲ್ಲರಿಗೂ ಅಂಕಗಳನ್ನು ನೀಡಿದರು.

ಒಟ್ಟಾರೆ ಮೊದಲ ದಿನವೇ ತಮ್ಮ ನೇರ ನುಡಿ ಹಾಗೂ ಅಭಿಪ್ರಾಯದ ಮೂಲಕ ಮನೆಯ ಸದಸ್ಯರ ಎದುರು ಹಾಕಿಕೊಳ್ಳುತ್ತಿರುವ ಚಂದ್ರಚೂಡ್ ಚಕ್ರವರ್ತಿ ಬಿಗ್‍ಬಾಸ್ ಮನೆಯಲ್ಲಿ ಇನ್ಮುಂದೆ ಕಿಚ್ಚೆಬ್ಬಿಸುವುದು ನಿಶ್ಚಿತ.

Comments

Leave a Reply

Your email address will not be published. Required fields are marked *