ಬಿಗ್ ಮನೆಗೆ ಬಂತು ವಿಶೇಷ ಗಿಫ್ಟ್

ಬೆಂಗಳೂರು: ವಾರದ ಕಟ್ಟೆ ಪಂಚಾಯ್ತಿಯಲ್ಲಿ ಮನೆಯ ಸದಸ್ಯರಿಗೆ ಕೆಲವು ಬುದ್ದಿಮಾತುಗಳನ್ನು ಸುದೀಪ್ ಹೇಳಿದ್ದಾರೆ. ಮನೆಯಿಂದ ಒಬ್ಬರು ಹೊರ ಹೋಗಿದ್ದಾರೆ. ಮುಂದಿನವಾರದ ಯೋಚನೆಯೊಂದಿಗೆ ಒಂಟಿ ಮನೆಯ ಸದಸ್ಯರು ದಿನವನ್ನು ಆರಂಭಿಸಿದ್ದಾರೆ. ಬೆಳ್ಳಂಬೆಳಗ್ಗೆನೆ ಬಿಗ್‍ಬಾಸ್ ಮನೆಗೆ ಒಂದು ವಿಶೇಷ ಗಿಫ್ಟ್ ಕಳುಹಿಸಿಕೊಟ್ಟಿದ್ದಾರೆ.

ವಾರದ ಕಟ್ಟೆ ಪಂಚಾಯ್ತಿಯಲ್ಲಿ ಕಿಚ್ಚನಿಂದ ಚಪ್ಪಾಳೆ ಪಡೆದ ಬಿಗ್ ಮನೆಯ ಸದಸ್ಯರಾದ ಶಂಕರ್ ಅಶ್ವಥ ಅವರಿಗೆ ಬಿಗ್ ಬಾಸ್ ನಿಂದ ವಿಶೇಷವಾದ ಗಿಫ್ಟ್ ಬಂದಿದೆ. ಮನೆಯ ಸದಸ್ಯರು ನಗು ಮುಖದಿಂದ ಶುಭ ಕೋರಿದ್ದಾರೆ. ಆದರೆ ನಗು ಮುಖದ ಹಿಂದೆ ನಾವು ಮುಂದಿನವಾರ ಚಪ್ಪಾಳೆ ಪಡೆಯಬೇಕು ಹಂಬಲ ಪ್ರತಿಯೊಬ್ಬರಲ್ಲಿಯೂ ಇದೆ.

ಬ್ರೋ ಗೌಡಾ ಇದೆಲ್ಲಾ ನಿಮ್ಮಿಂದ..!
ಲಿವಿಂಗ್ ಏರಿಯಾದಲ್ಲಿ ಇರುವ ಫೋಟೋ ಪ್ರೇಮ್‍ಗಳಲ್ಲಿ ಈ ಫೋಟೋವನ್ನು ಜೋಡಿಸಿ ಎಂದು ಬಿಗ್ ಬಾಸ್ ಸೂಚಿಸಿದ್ದರು. ಫೋಟೋವನ್ನು ನೋಡುತ್ತಿದ್ದಂತೆ ಮನೆಯ ಸದಸ್ಯರು ಸಂತೋಷ ಪಟ್ಟಿದ್ದಾರೆ. ಈ ಚಪ್ಪಾಳೆಗೆ ಕಾರಣರಾದ ಮನೆಯ ಸದಸ್ಯರಿಗೆ ಶಂಕರ್ ಆಶ್ವಥ್ ಧನ್ಯವಾದವನ್ನು ಹೇಳಿದ್ದಾರೆ. ಹಾಗೇ ಬ್ರೋ ಗೌಡಾ ಅವರಿಗೆ ನೀವು ನನ್ನ ನಾಮಿನೇಟ್ ಮಾಡಿರುವುದು ಎಂದು ಹೇಳಿದ್ದಾರೆ. ಆಗ ಬ್ರೋ ಗೌಡಾ ತಮ್ಮದೇ ಆಗಿರುವ ಮುಗ್ದತೆಯಿಂದ ಅಶ್ವಥ್ ಅವರನ್ನು ತಬ್ಬಿಕೊಂಡಿದ್ದಾರೆ.

ಬಾ ದಿ ಎಂದರೆ ಏನ್ ಅರ್ಥ ಗೊತ್ತಾ?
ಗಾರ್ಡ್‍ನ್ ಏರಿಯಾದಲ್ಲಿ ಎಲ್ಲರೂ ಕುಳಿತ್ತಿದ್ದರು. ಈ ವೇಳೆ ದಿವ್ಯ ಉರುಡುಗ ಅವರು ಅರುಣ್ ಮತ್ತು ಮಂಜು ಇರುವ ಸ್ಥಳಕ್ಕೆ ಬರುತ್ತಾರೆ ಆಗ ಮಂಜು ಬಾ ದಿ ಎನ್ನುತ್ತಾರೆ. ಓ ಏನು ಕಾಫಿ ಏನಾದರೂ ಬೇಕಾ.. ದಿ ಎಂದರೆ ನೀವು ಅದಕ್ಕೆ ಕರೆಯುತ್ತಿರಾ ಹೇಳಿ ಎಂದು ದಿವ್ಯಾ ಹೇಳಿದ್ದಾರೆ. ಈ ವೇಳೆ ಮಂಜು, ಅರುಣ್ ಕೆಲವೆ ದಿನದಲ್ಲಿ ದಿವ್ಯ ಎಷ್ಟೊಂದು ಹುಶಾರಾಗಿ ಬಿಟ್ಟಿದ್ದಾರೆ ಎಂದು ಹೇಳಿ ನಕ್ಕಿದ್ದಾರೆ.

ನಿಜವಾದ ಪ್ರೀತಿಗೆ ಕಣ್ಣಿಲ್ಲ..!
ಪ್ರೀತಿ ಮಾಡೋದ್ ಗೊತ್ತಿಲ್ಲ ನನಗೆ.. ಪ್ರೀತಿ ಹುಟ್ಟೋದು ಒಳಗಿಂದಾನೆ ಗೊತ್ತಿಲ್ಲವಾ ನಿನಗೆ ಎಂದು ದಿವ್ಯನಿಗೆ ಹಾಡು ಹೇಳಿ ನಿಜವಾದ ಪ್ರೀತಿಗೆ ಕಣ್ಣಿಲ್ಲ ಎಂದಿದ್ದಾರೆ. ಇದನ್ನು ಕೇಳಿದ ದಿವ್ಯ ಉರುಡುಗ ಮಂಜಾ ನಿನಗೆ ಎಷ್ಟು ಪ್ರೀತಿ ಇದೆಯೋ ಎಂದು ಹೇಳಿ ನಕ್ಕಿದ್ದಾರೆ.

ಬಿಗ್ ಮನೆಯಲ್ಲಿ ಜಗಳ, ಕಣ್ಣೀರು, ಕಾಮಿಡಿ ಎಲ್ಲ ಕಾಮನ್. ಬಿಗ್ ಬಾಸ್ ಹೌಸ್ ನಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣಕ್ಕಂತೂ ಕಮ್ಮಿ ಇಲ್ಲ. ಪ್ರತಿನಿತ್ಯ ಮನೆಯಲ್ಲಿ ಬಣ್ಣ ಬಣ್ಣದ ಕಥೆಗಳು ಸಿಗುತ್ತಲೆ ಇರುತ್ತವೆ. ಬಿಗ್ ಮನೆಯ ಸೂತ್ರದಗೊಂಬೆಗಳನ್ನು ಆಡಿಸುವಾತ ಬಿಗ್‍ಬಾಸ್ ಇವರೆಲ್ಲ ನೆಪ ಮಾತ್ರ.

Comments

Leave a Reply

Your email address will not be published. Required fields are marked *