ಪ್ರಧಾನಿ ಮೋದಿ ಪಕ್ಷಿಗಳಿಗೆ ಉಣಿಸಿದ್ದಕ್ಕೆ ಹಕ್ಕಿ ಜ್ವರ ಬಂದಿದೆ: ಸಮಾಜವಾದಿ ಪಕ್ಷದ ನಾಯಕ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಕ್ಷಿಗಳಿಗೆ ಆಹಾರ ತಿನಿಸಿದ್ದಕ್ಕೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಐಪಿ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಹಕ್ಕಿಗಳಿಗೆ ಆಹಾರ ಉಣಿಸುವ ಫೋಟೋ ಪೋಸ್ಟ್ ಮಾಡಿ, ಈ ವ್ಯಕ್ತಿಯನ್ನು ಏನು ಮಾಡಬೇಕು? ಅವರು ಬಡ ಪಕ್ಷಿಗಳಿಗೆ ಆಹಾರ ನೀಡಿದರು. ಆದರೆ ಅವು ಹಕ್ಕಿ ಜ್ವರದಿಂದ ಕೊನೆಗೊಂಡಿತು ಎಂದು ಬರೆದುಕೊಂಡಿದ್ದಾರೆ.

ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಮನುಷ್ಯರಿಗೆ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ದೆಹಲಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲು ಚಿಂತನೆ ನಡೆಸಿದೆ. ಕೇರಳ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನ ನಾಲ್ಕು ರಾಜ್ಯಗಳ 12 ಕೇಂದ್ರಗಳಲ್ಲಿ ಏಕಾಏಕಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

Comments

Leave a Reply

Your email address will not be published. Required fields are marked *