ಚಿನ್ನಾಭರಣ, ನಗದು ಜೊತೆ ಕಾಲ್ಕಿತ್ತ ವಧು

– ಕುಟುಂಬಸ್ಥರಿಂದ ದೂರು ದಾಖಲು

ಪಾಟ್ನಾ: ರಾತ್ರಿ ಚಿನ್ನಾಭರಣ ಮತ್ತು ನಗದು ಜೊತೆ ವಧು ಮನೆಯಿಂದ ಎಸ್ಕೇಪ್ ಆಗಿರುವ ಘಟನೆ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ವರನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪರಾರಿಯಾಗಿರುವ ವಧುವಿನ ಹುಡುಕಾಟದಲ್ಲಿದ್ದಾರೆ.

ಪಾಟ್ನಾದ ಚೌಕ್ ಠಾಣಾ ಕ್ಷೇತ್ರದ ನಿವಾಸಿ ರಾಜೇಶ್ ರಾಮ್ ನವೆಂಬರ್ 29ರಂದು ಪುತ್ರ ಸುಧೀರ್ ಕುಮಾರ್ ಮದುವೆಯನ್ನ ಬೇಗೂಸರಾಯ್ ನ ಸಂಜಯ್ ರಾವತ್ ಪುತ್ರಿ ಮೋನಿ ಕುಮಾರಿ ಜೊತೆ ಮಾಡಿದ್ದರು. ಮದುವೆ ನಂತರ ಮೋನಿ ಕುಮಾರಿ ಪತಿ ಮತ್ತು ಕುಟುಂಬಸ್ಥರ ಜೊತೆ ಚೆನ್ನಾಗಿಯೇ ಇದ್ದಳು. ಮಂಗಳವಾರ ರಾತ್ರಿ ಚಿನ್ನಾಭರಣ, ನಗದು ಮತ್ತು ಅಮೂಲ್ಯ ವಸ್ತುಗಳ ಜೊತೆ ಮನೆಯಿಂದ ಪರಾರಿಯಾಗಿದ್ದಾಳೆ.

ಬೆಳಗ್ಗೆ ವಧು ಮೋನಿ ಕುಮಾರಿ ಮತ್ತು ಮನೆಯಲ್ಲಿಯ ಚಿನ್ನಾಭರಣ ಕಾಣದಿದ್ದಾಗ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಮೋನಿ ಕುಮಾರಿಯ ಸುಳಿವು ಸಿಗಿದಿದ್ದಾಗ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ವಸ್ತುಗಳು ಕಾಣೆಯಾಗಿದೆ ಎಂದು ತಿಳಿಸಿದ್ದಾರೆ. ವಧು ಮೋನಿ ಕುಮಾರಿಯನ್ನ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

Comments

Leave a Reply

Your email address will not be published. Required fields are marked *