ರಕ್ಷಣಾ ವೇದಿಕೆ ಹೆಸರಲ್ಲಿ ಪೊಲೀಸ್, ಮಾರ್ಷಲ್ ಸಿಬ್ಬಂದಿ ಮೇಲೆ ದರ್ಪ!

ಬೆಂಗಳೂರು: ಕಾರಲ್ಲಿ ಹೋಗುತ್ತಿದ್ದವರನ್ನು ಮಾಸ್ಕ್ ಹಾಕಿಲ್ಲ ಎಂದು ಮಾರ್ಷಲ್ ಹಾಗೂ ಪೊಲೀಸ್ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಕರವೇ ಗಜಸೇನೆಯ ರಾಘವೇಂದ್ರ ಪೊಲೀಸ್, ಮಾರ್ಷಲ್ ಸಿಬ್ಬಂದಿಯ ಮೇಲೆ ದಬ್ಬಾಳಿಕೆ ಮಾಡಿದ್ದಾರೆ.

ಸುಬ್ರಮಣ್ಯಪುರ ಸ್ಟೇಷನ್ ಬಳಿ ಇನ್ನೋವಾ ಕಾರಲ್ಲಿ ಹೋಗುತ್ತಿದ್ದವರನ್ನು ಮಾಸ್ಕ್ ಹಾಕಿಲ್ಲ ಎಂದು ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಕರವೇ ಗಜಸೇನೆಯ ರಾಘವೇಂದ್ರ ಎಂಬ ವ್ಯಕ್ತಿ ನಾವು ಎಸಿ ಹಾಕೊಂಡಿದ್ದೀವಿ, ನಾವಿಬ್ಬರು ಒಂದೇ ಮನೆಯಲ್ಲಿ ಇರೋದು. ಗ್ಲಾಸ್ ಇಳಿಸಿಲ್ಲ ಹೀಗಾಗಿ ಮಾಸ್ಕ್ ದಂಡ ಕಟ್ಟಿ ಅಂದ್ರೆ ಹೇಗೆ ಅಂತ ಮಾರ್ಷಲ್ ಗಳು ಮತ್ತು ಪೊಲೀಸರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ.


ಕಾರನ್ನು ಸೈಡ್‍ಗೆ ಹಾಕಿ ಎಂದು ಸಿಬ್ಬಂದಿ ಹೇಳಿದ್ದಾರೆ. ರಾಘವೇಂದ್ರ ಸಿಬ್ಬಂದಿಯ ಮಾತು ಕೇಳದೆ ಟ್ರಾಫಿಕ್ ಜಾಮ್ ಮಾಡಿದ್ದಾರೆ. ಅಲ್ಲದೆ ನೀವು ಏಕೆ ತಲೆ ಮೇಲೆ ಟೋಪಿ ಹಾಕಿಲ್ಲ ಅಂತ ಪೊಲೀಸರಿಗೆ ಅವಾಜ್ ಹಾಕಿದ್ದಾರೆ.

ಮಾಸ್ಕ್ ಹಾಕದೆ ತಪ್ಪು ಮಾಡಿದ್ದಲ್ಲದೆ, ತಾನು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ. ಫೇಸ್ ಬುಕ್ ಲೈವ್ ಮಾಡಿ ತಪ್ಪನ್ನ ಮರೆಮಾಚುವ ಪ್ರಯತ್ನ ಮಾಡಿದ್ದಾರೆ. ಕೊನೆಗೂ ಫೈನ್ ಕಟ್ಟದೆ ದೌರ್ಜನ್ಯ ನಡೆಸಿ ಸ್ಥಳದಿಂದ ರಾಘವೇಂದ್ರ ಮತ್ತು ಅವನ ಸಹೋದರ ಹೊರಟು ಹೋಗಿದ್ದಾರೆ.

Comments

Leave a Reply

Your email address will not be published. Required fields are marked *