ಮಂತ್ರಾಲಯದಲ್ಲಿ ತೆಪ್ಪೋತ್ಸವ ಸಂಭ್ರಮ- ಸಾವಿರಾರು ಭಕ್ತರು ಭಾಗಿ

ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಇಂದು ತುಂಗಾರತಿ ಸಂಭ್ರಮ ಮನೆ ಮಾಡಿತ್ತು. ಕಾರ್ತಿಕ ಪೂರ್ಣಮೆ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ ತೆಪ್ಪೋತ್ಸವ ನೆರವೇರಿಸಲಾಯಿತು.

ಉತ್ಸವಮೂರ್ತಿ ಪ್ರಹ್ಲಾದ ರಾಜರಿಗೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತುಂಗಭದ್ರಾ ನದಿಯಲ್ಲಿ ಪ್ರಹ್ಲಾದರಾಜರ ತೆಪ್ಪೋತ್ಸವ ಜರುಗಿತು.

ಕಾರ್ತಿಕ ಪೂರ್ಣಮೆ ಹಿನ್ನೆಲೆ ನದಿ ದಡದಲ್ಲಿ ಭಕ್ತರಿಂದ ದೀಪೋತ್ಸವ ನಡೆದಿದೆ. ಈ ವರ್ಷ ತುಂಗಭದ್ರಾ ನದಿಯಲ್ಲೆ ಪುಷ್ಕರ ಇರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ನವೆಂಬರ್ 20 ರಿಂದ ಆರಂಭವಾದ ಪುಷ್ಕರ ನಾಳೆ ಅಂತ್ಯವಾಗಲಿದ್ದು, ಮಂತ್ರಾಲಯ ಶ್ರೀ ಮಠದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ.

Comments

Leave a Reply

Your email address will not be published. Required fields are marked *