ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮುನಿರತ್ನ

ಬೆಂಗಳೂರು: ಕಾಂಗ್ರೆಸ್ ನಾಯಕರ ಹೇಳಿಕೆಗೆ ನೊಂದ ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದ್ದಾರೆ.

ಇಂದು ನಾಯಕರು ಹೋದಾಗ ಪ್ರತಿಪಕ್ಷದ ಕಾರ್ಯಕರ್ತರು ತಮ್ಮ ಲೀಡರ್ ಹೆಸರು ಹೇಳಿ ಜಿಂದಾಬಾದ್ ಹೇಳುವುದು ಸಾಮಾನ್ಯ. ಒಂದು ಸಾರಿ ಸಿದ್ದರಾಮಯ್ಯನವರು ಮತ್ತು ನಾನು ಕಾರ್ ನಲ್ಲಿ ಹೋಗುತ್ತಿರುವಾಗ ಯುವಮೋರ್ಚಾ ಕಾರ್ಯಕರ್ತರು ಮೋದಿ ಜಿಂದಾಬಾದ್ ಅಂತ ಕೂಗಿದ್ದರು. ಕೆಲ ನಿಮಿಷ ಘೋಷಣೆ ಕೂಗ್ತಾರೆ ಅಂತ ಸುಮ್ಮನಾಗಿದ್ದೆ. ಬೇರೆ ಪಕ್ಷದವರು ಜಿಂದಾಬಾದ್ ಕೂಗುವ ವೇಳೆ ಒಬ್ಬ ನಾಯಕರು, ಮುನಿರತ್ನ ಅವರ ತಾಯಿಯನ್ನ ಬಿಜೆಪಿಗೆ ಮಾರಾಟ ಮಾಡಿದ್ದಾನೆ. ಈ ರೀತಿ ಮಾತಾಡಿದಾಗ ಅಲ್ಲಿದ್ದ ಪಕ್ಷದ ಕಾರ್ಯಕರ್ತರು ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಧರಣಿ ನಡೆಸಿದ್ದಾರೆ. ಬಿಜೆಪಿಯ ಕಾರ್ಯಕರ್ತರು ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ ಎಂದು ಮುನಿರತ್ನ ಸ್ಪಷ್ಟನೆ ನೀಡಿದರು.

ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಟೀಕೆಗಳನ್ನ ಮಾಡುತ್ತಿದ್ದಾರೆ. ಇಲ್ಲ ಸಲ್ಲದ ಆರೋಪಗಳನ್ನ ಮಾಡುವ ಮೂಲಕ ಪ್ರಚಾರ ನಡೆಸುತ್ತಿರುವದಕ್ಕೆ ನನ್ನ ವಿರೋಧವಿಲ್ಲ. ತೀರಿ ಹೋಗಿರುವ ನನ್ನ ತಾಯಿಯನ್ನ ಮಾರಾಟ ಮಾಡಿದ್ದೀರಿ ಅಂತ ಹೇಳಿದ್ದೀರಿ. ನಮ್ಮ ಅಮ್ಮ ಸಾವನ್ನಪ್ಪಿ 25 ವರ್ಷ ಆಗಿದೆ. ಮುನಿರತ್ನ ತಾಯಿಯನ್ನ ಮಾರಾಟ ಮಾಡಿದ್ದಾನೆ ಎಂಬ ಹೇಳಿಕೆ ನಿಮಗೆ ಶೋಭೆ ತರುತ್ತಾ? ಜನ್ಮ ಕೊಟ್ಟ ತಾಯಿ ಬಗ್ಗೆ ಮಾತನಾಡಬೇಡಿ. ನನ್ನ ಬಗ್ಗೆ ಮಾತಾಡಿ, ಟೀಕಿಸಿ ನಾನು ಬೇಡ ಅಂತ ಹೇಳಲ್ಲ. ಚುನಾವಣೆಯಲ್ಲಿ ತಾಯಿ ಬಗ್ಗೆ ಮಾತನಾಡೋದು ಏಕೆ? ಸತ್ತು ಹೋಗಿರುವ ತಾಯಿಯನ್ನ ಎಲ್ಲಿಂದ ಮಾರಾಟ ಮಾಡಲಿ? ಎಲ್ಲಿಂದ ನಮ್ಮ ತಾಯಿಯನ್ನ ಕರೆದುಕೊಂಡು ಬರಲಿ ಎಂದು ಕಾಂಗ್ರೆಸ್ ನಾಯಕರಿಗೆ ಕೈ ಮುಗಿದು ಕಣ್ಣೀರಿಟ್ಟರು.

Comments

Leave a Reply

Your email address will not be published. Required fields are marked *