ಅಧಿವೇಶನ ಇದ್ರೂ ಕುಟುಂಬ ಸಮೇತ ರೆಸಾರ್ಟಿನಲ್ಲೇ ಹೆಚ್‍ಡಿಕೆ ವಾಸ್ತವ್ಯ

ಹಾಸನ: ಇಂದು ವಿಧಾನಸಭೆ ಅಧಿವೇಶನ ಇದ್ದರೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಸಮೇತವಾಗಿ ಹಾಸನದ ಖಾಸಗಿ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದನ್ನೂ ಓದಿ: 20ಕ್ಕೂ ಅಧಿಕ ಶಾಸಕರಿಗೆ ಕೋವಿಡ್ ಸೋಂಕು-ಕೊರೊನಾ ನಡುವೆ ಅಧಿವೇಶನ ಆರಂಭ

ಹಾಸನದ ಹೊಯ್ಸಳ ರೆಸಾರ್ಟಿನಲ್ಲಿ ಕುಮಾರಸ್ವಾಮಿ ಕುಟುಂಬ ವಾಸ್ತವ್ಯ ಮಾಡಿದೆ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಮತ್ತು ಸೊಸೆ ರೇವತಿ ಜೊತೆ ಕುಟುಂಬ ಸಮೇತರಾಗಿ ಹಾಸನ ಪ್ರವಾಸ ಕೈಗೊಂಡಿದ್ದಾರೆ. ಆದರೆ ಇಂದು ಕುಮಾರಸ್ವಾಮಿ ಮತ್ತು ಅನಿತಾ ಇಬ್ಬರು ಅಧಿವೇಶನಕ್ಕೂ ತೆರಳದೆ ರೆಸಾರ್ಟಿನಲ್ಲಿಯೇ ಉಳಿದುಕೊಂಡಿದ್ದಾರೆ.

ರೆಸಾರ್ಟಿಗೆ ಕಾರ್ಯಕರ್ತರು ಮತ್ತು ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಇನ್ನೂ ರೆಸಾರ್ಟಿಗೆ ಆಗಮಿಸಿರುವ ಕುಮಾರಸ್ವಾಮಿ ಕುಟುಂಬ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದಾರೆ. ಹಾಸನ ಡಿಎಚ್‍ಒ ಸತೀಶ್ ನೇತೃತ್ವದ ತಂಡ ಹೆಚ್‍ಡಿಕೆ ಕುಟುಂಬ ಸ್ವ್ಯಾಬ್ ಟೆಸ್ಟ್ ಮಾಡಿದೆ. ಹೀಗಾಗಿ ಕೊರೊನಾ ವರದಿ ಬಂದ ನಂತರ ಕುಮಾರಸ್ವಾಮಿ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *