ಹುಟ್ಟುಹಬ್ಬದ ದಿನವೇ ಕೊಲೆ – ವಿಶ್ ಮಾಡೋ ನೆಪದಲ್ಲಿ ಚಾಕುವಿನಿಂದ ಇರಿದ್ರು

ತುಮಕೂರು: ಹುಟ್ಟುಹಬ್ಬದ ದಿನವೇ ಯುವಕನನ್ನು ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಎನ್.ಆರ್.ಕಾಲೋನಿ ಬಳಿ ನಡೆದಿದೆ.

ಅನುಕುಮಾರ್ (22) ಕೊಲೆಯಾದ ಯುವಕ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ರಾಜು ಹಾಗೂ ರಾಜುವಿನ ಸ್ನೇಹಿತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ ಮೃತ ಅನುಕುಮಾರ್ ಹುಟ್ಟುಹಬ್ಬ ಇತ್ತು. ತಡರಾತ್ರಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಅನುಕುಮಾರ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ನೆಪದಲ್ಲಿ ರಾಜು ಹಾಗೂ ರಾಜುವಿನ ಸ್ನೇಹಿತರು ಬಂದಿದ್ದಾರೆ. ನಂತರ ಅನುಕುಮಾರ್‌ಗೆ ಏಕಾಏಕಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ರಾಜು ಹಾಗೂ ಅನುಕುಮಾರ್ ನಡುವೆ ಜಗಳ ನಡೆದಿತ್ತು. ಹೀಗಾಗಿ ಹಳೆ ವೈಷಮ್ಯ ಹಿನ್ನೆಲೆಯಲ್ಲಿ ರಾಜು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಕೊಲೆ ಮಾಡಿದ್ದಾನೆ. ಈ ಕುರಿತು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *