ಬಂಧನದ ಭೀತಿಯಲ್ಲಿ ವಕೀಲರ ಭೇಟಿಯಾದ ರಾಗಿಣಿ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಈ ಬೆನ್ನಲ್ಲೇ ನಟಿ ಎಸ್ಕೇಪ್ ಆದ್ರಾ ಅನ್ನೋ ಪ್ರಶ್ನೆಯೊಂದು ಮೂಡಿತ್ತು. ಆದರೆ ಅವರು ವಕೀಲರನ್ನು ಭೇಟಿಯಾಗಲು ತೆರಳಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಹೌದು. ರಾತ್ರಿ 11 ಗಂಟೆಯಿಂದ ಮೇಡಂ ಮನೆಯಿಂದ ಹೊರ ಹೋಗಿದ್ದಾರೆ ಅಂತ ಯಲಹಂಕ ಮನೆಯ ಸೆಕ್ಯುರಿಟಿ ಗಾರ್ಡ್ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಟಿ ಎಸ್ಕೇಪ್ ಆದ್ರಾ ಅನ್ನೋ ಅನುಮಾನ ಮೂಡಿತ್ತು. ಆದರೆ ಇದೀಗ ಆಕೆ ಕಾನೂನು ತಜ್ಞರ ಮೊರೆ ಹೋಗಿರುವುದಾಗಿ ತಿಳಿದುಬಂದಿದೆ. ಈ ಮೂಲಕ ನಟಿಗೆ ಬಂಧನದ ಭೀತಿ ಶುರುವಾಗಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.

ವಕೀಲರ ಭೇಟಿಯಾಗಿ ಬಳಿಕ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಅಥವಾ ಮತ್ತೆ ಸಿಸಿಬಿ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳೋ ಸಾಧ್ಯತೆಯೂ ಹೆಚ್ಚಿದೆ. ಈಗಾಗಲೇ ಸ್ನೇಹಿತ ರವಿಶಂಕರ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನೆಡಸುತ್ತಿದ್ದಾರೆ. ಇಬ್ಬರೂ ಒಂದೇ ಪಾತ್ರ ನಿರ್ವಹಣೆ ಹಿನ್ನೆಲೆಯಲ್ಲಿ ರಾಗಿಣಿಗೂ ಶುರುವಾಗಿದ್ಯಾ ಬಂಧನದ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ನಟಿ ಹಿಂದೇಟು ಹಾಕುತ್ತಿದ್ದು, ಒಂದು ವೇಳೆ ನಟಿ ವಿಚಾರಣೆಗೆ ಹಾಜರಾಗದೇ ಇದ್ದರೆ ರಾಗಿಣಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

Comments

Leave a Reply

Your email address will not be published. Required fields are marked *