ಗಣೇಶನಿಂದ ಕೊರೊನಾ ಜಾಗೃತಿ- ಗಜಾನನ ವೇಷ ಧರಿಸಿ ವ್ಯಕ್ತಿಯಿಂದ ಅರಿವು

ಮೈಸೂರು: ಇತ್ತಿಚೆಗೆ ಕೊರೊನಾ ವಾರಿಯರ್ಸ್ ವೈದ್ಯರ ಅವತಾರ ತಾಳಿದ್ದ ಗಣೇಶ ಮೂರ್ತಿಯನ್ನು ನೋಡಿದ್ದೆವು. ಆದರೆ ಇಲ್ಲೊಬ್ಬರು ತಾವೇ ಗಣೇಶನ ವೇಷ ಧರಿಸಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಮೈಸೂರಿನ ಅಗ್ರಹಾರ ವೃತ್ತದಲ್ಲಿ ಸಾರ್ವಜನಿಕರಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸಲು ಪರಿಸರ ಸ್ನೇಹಿ ತಂಡದಿಂದ ಗಣೇಶನ ಹಬ್ಬಕ್ಕೂ ಮುನ್ನ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ವ್ಯಕ್ತಿಯೊಬ್ಬರು ಗಣೇಶನ ವೇಷ ಧರಿಸಿದ್ದು, ಮಾಸ್ಕ್ ಧರಿಸದವರಿಗೆ ಅವರೇ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡುವಂತೆ ತಿಳಿ ಹೇಳುವುದು ಸೇರಿದಂತೆ ಕೊರೊನಾ ಕುರಿತು ಹಲವು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ, ಜನ ಮಾತ್ರ ಡೋಂಟ್ ಕೇರ್ ಎಂದು ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಸಂಚಿಸುತ್ತಿದ್ದಾರೆ.

ಕೊರೊನಾದಿಂದಾಗಿ ಈ ಬಾರಿ ಗಣೇಶ ಹಬ್ಬವನ್ನು ಸಹ ಅದ್ಧೂರಿಯಾಗಿ ಆಚರಿಸಲು ಆಗಯತ್ತಿಲ್ಲ. ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಿದ್ದರೂ ಜನ ಮಾತ್ರ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಮೈ ಮರೆತಿದ್ದಾರೆ. ಇಂತಹವರಿಗೆ ಅರಿವು ಮೂಡಿಸಲು ವ್ಯಕ್ತಿಯೊಬ್ಬರು ಗಣೇಶನ ವೇಷ ಧರಿಸಿದ್ದಾರೆ. ಕೊರೊನಾ ನಿಯಮದ ಕುರಿತು ತಿಳಿ ಹೇಳುತ್ತಿದ್ದಾರೆ. ಕೊರೊನಾ ವಾರಿಯರ್ಸ್ ಗೆ,ಸಾರ್ವಜನಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಗಣಪನ ವೇಷಧಾರಿ ಮಾಸ್ಕ್ ವಿತರಿಸಿದ್ದಾರೆ.

Comments

Leave a Reply

Your email address will not be published. Required fields are marked *