ಹೊಸ ಜೀವನಕ್ಕೆ ಕಾಲಿಟ್ಟ ಅನಾಥೆ – ಸಾವಿತ್ರಿಗೆ ಆಸೆರೆಯಾದ ಸೇವಾ ಭಾರತಿ ಟ್ರಸ್ಟ್

ಹುಬ್ಬಳ್ಳಿ: ಅನಾಥ ಬಾಲಕಿಯನ್ನು ಪಾಲನೆ, ಪೋಷಣೆ ಮಾಡಿ ಬೆಳೆಸಿದ ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ ಇಂದು ಯುವತಿಯನ್ನ ಅದ್ಧೂರಿಯಾಗಿ ಮದುವೆ ಮಾಡಿಕೊಡುವ ಮೂಲಕ ಸಾವಿತ್ರಿ ಬಾಳಿಗೆ ಆಸೆರೆಯಾಗಿದೆ.

ನಗರದಲ್ಲಿ ನಡೆದ ಸರಳ ವಿವಾಹದ ಮೂಲಕ ಸಾವಿತ್ರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಹುಟ್ಟಿದಾಗಿನಿಂದ ಇಲ್ಲಿಯವರೆಗೆ ತಂದೆ, ತಾಯಿಯ ಆಸರೆಯಲ್ಲಿ ಬೆಳೆಯದಿದ್ದರೂ ಇದೀಗ ಅಂದುಕೊಂಡಂತೆ ಮದುವೆಯಾಗಿದೆ. ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ ನ ಪ್ರಕಲ್ಪವಾದ ಮಾತೃ ಛಾಯಾ ಬಾಲಕಲ್ಯಾಣ ಕೇಂದ್ರದ ಯುವತಿ ಇಂದು ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾಳೆ.

ಬಿ.ಕಾಂ ಪದವಿಧರೆಯಾಗಿರುವ 24 ವರ್ಷದ ಸಾವಿತ್ರಿ, ಸದ್ಯ ರಾಷ್ಟ್ರ ಸೇವಿಕ ಸಮಿತಿಯ ಪ್ರಾಂತದ ಸಹಶಾರೀರಕಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಅವರು ಕುಮಟಾ ತಾಲೂಕಿನ ಅಜ್ಜಿ ಗದ್ದೆಯ ಕಂದವಳ್ಳಿ ಗ್ರಾಮದ ಕೃಷಿ ಕುಟುಂಬದ ರೇವಂತನೊಂದಿಗೆ ಸಪ್ತಪದಿ ತುಳಿದರು. ಪಿಯುಸಿ ಓದಿರುವ ರೇವಂತ, ಅನಾಥ ಯುವತಿಯನ್ನು ಮದುವೆಯಾಗಿ ಬಾಳಿಗೆ ಅರ್ಥ ಕೊಡಬೇಕು ಎಂಬ ಕನಸು ಹೊಂದಿದ್ದರು. ಈ ಹಿನ್ನೆಲೆ ಸಾವಿತ್ರಿಯವರನ್ನು ವಿವಾಹವಾಗಿದ್ದಾರೆ.

ಅನಾಥ ಯುವತಿ ಸಾವಿತ್ರಿಯನ್ನು ಕೇಂದ್ರ ಸಚಿವ ಪ್ರಹ್ಲಾದ್‌ಜೋಶಿ ಸಹೋದರ ಗೋವಿಂದ ಜೋಶಿ ಧಾರೆ ಎರೆದುಕೊಡುವ ಮೂಲಕ ಬ್ರಾಹ್ಮಣ ಸಮುದಾಯದಲ್ಲಿ ನಡೆಯಬೇಕಾದ ಎಲ್ಲ ಪದ್ಧತಿ, ಸಂಪ್ರದಾಯಗಳ ಮೂಲಕ ಮದುವೆ ಮಾಡಿಕೊಟ್ಟಿರು. ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ ಮೂಲಕ ನಡೆಯುತ್ತಿರುವ 4ನೇ ಮದುವೆ ಇದಾಗಿದೆ.

ಮದುವೆ ಕಾರ್ಯದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಶಿಲ್ಪಾ ಶೆಟ್ಟರ್, ಸಂಘ ಪರಿವಾರದ ಹಿರಿಯರಾದ ಮಂಗೇಶ ಬೆಂಡೆ, ಆರ್‌ಎಸ್‍ಎಸ್‍ ಪ್ರಚಾರಕರಾದ ಸೂ ರಾಮಣ್ಣ, ರಘು ಅಕಮಚ್ಚಿ, ಕೃಷ್ಣಾ ಕುಲಕರ್ಣಿ, ಭಾರತಿ ನಂದಕುಮಾರ ವೀಣಾ ಮಳಿ, ಮಂಜುಳಾ ಕೃಷ್ಣನ್, ಸವಿತಾ ಕರಮರಿ ಸೇರಿದಂತೆ ಹಲವರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನೂತನ ವಧು ವರರಿಗೆ ಹಾರೈಸಿದರು.

Comments

Leave a Reply

Your email address will not be published. Required fields are marked *