ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಟೀ ಮಾರಾಟಗಾರನಿಗೆ ಬ್ಯಾಂಕ್ ನೀಡಿತ್ತು 50 ಕೋಟಿಯ ಶಾಕ್!

ಚಂಡೀಗಢ: ಸಾಲಕ್ಕಾಗಿ ಅರ್ಜಿ ಹಾಕಿದ ಟೀ ಮಾರಾಟಗಾರರೊಬ್ಬರಿಗೆ ಬ್ಯಾಂಕ್ 50 ಕೋಟಿ ರೂಪಾಯಿಯ ಶಾಕ್ ನೀಡಿದ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ.

ಹೌದು. ಕೊರೊನಾ ಎಂಬ ಚೀನಿ ವೈರಸ್ ದೇಶಕ್ಕೆ ಕಾಲಿಟ್ಟ ಬಳಿಕ ಹಲವು ಮಂದಿಯ ಬದುಕು ದುಸ್ಥರವಾಗಿದೆ. ಹಾಗೆಯೇ ರಸ್ತೆ ಬದಿ ಟೀ ಮಾರುತ್ತಾ ಜೀವನ ನಡೆಸುತ್ತಿದ್ದ ರಾಜ್‍ಕುಮಾರ್ ಅವರ ಬದುಕಿಗೂ ಮಹಾಮಾರಿ ವೈರಸ್ ಕುತ್ತು ತಂದಿದೆ. ಈ ಹಿನ್ನೆಲೆಯಲ್ಲಿ ಜೀವನ ನಡೆಸಲು ಬೇರೆ ದಾರಿ ಇಲ್ಲದೆ ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಬ್ಯಾಂಕ್ ಸಿಬ್ಬಂದಿ, ಅರ್ಜಿ ತಿರಸ್ಕರಿಸಿದ್ದಾರೆ. ಪರಿಣಾಮ ರಾಜ್ ಕುಮಾರ್ ಜೀವನ ಹೇಗೆ ನಡೆಸುವುದು ಎಂದು ಚಿಂತೆಗೀಡಾದರು.

ಹೀಗೆ ಆಲೋಚನೆಯಲ್ಲಿರುವಾಗಲೇ ಬ್ಯಾಂಕ್ ಸಿಬ್ಬಂದಿ, ನೀವು ಈಗಾಗಲೇ 50 ಕೋಟಿ ಸಾಲ ಪಡೆದಿದ್ದು, ಹೀಗಾಗಿ ಮತ್ತೆ ಸಾಲ ನೀಡಲು ಸಾಧ್ಯವಿಲ್ಲ ಎಂಬ ಶಾಕಿಂಗ್ ವಿಚಾರವೊಂದನ್ನು ತಿಳಿಸಿದ್ದಾರೆ.

ಕುರುಕ್ಷೇತ್ರ ನಿವಾಸಿಯಾಗಿರುವ ರಾಜ್‍ಕುಮಾರ್ ಚಹಾ ಮಾರಟ ಮಾಡಿ ತನ್ನ ಕುಟುಂಬದ ಬಂಡಿ ಸಾಗಿಸುತ್ತಿದ್ದರು. ಇದೂವರೆಗೂ ಸಾಲ ಪಡೆಯದ ರಾಜ್ ಕುಮಾರ್‍ಗೆ ಇದೀಗ ಬ್ಯಾಂಕ್ ಸಿಬ್ಬಂದಿ ನೀವು ಈಗಾಗಲೇ 50 ಕೋಟಿ ಸಾಲ ಉಳಿಸಿಕೊಂಡಿದ್ದೀರಿ ಎಂದು ಹೇಳಿರುವುದು ಆಕಾಶವೇ ಕಳಚಿ ಬಿದ್ದಂತಾಗಿದೆ.

ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ನನ್ನ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಮುಂದೆ ಜೀವನ ಸಾಗಿಸಲೆಂದು ಸಾಲಕ್ಕಾಗಿ ಬ್ಯಾಮಕಿಗೆ ಅರ್ಜಿ ಸಲ್ಲಿಸಿದೆ. ಈ ವೇಳೆ ಬ್ಯಾಂಕ್ ನನ್ನ ಅರ್ಜಿ ತಿರಸ್ಕರಿಸಿ, 50 ಕೋಟಿ ಸಾಲ ಉಳಿಸಿಕೊಂಡಿದ್ದೀರಿ ಎಂದು ಹೇಳಿದೆ. ಇದು ಹೇಗೆ ಸಾಧ್ಯ ಎಂದು ನನಗೆ ತಿಳಿದಿಲ್ಲ ಎಂದು ರಾಜ್ ಕುಮಾರ್ ಮಾಧ್ಯಮದ ಜೊತೆ ಮಾತನಾಡುತ್ತಾ ಬೇಸರ ಹೊರಹಕಿದ್ದಾರೆ.

ರಸ್ತೆ ಬದಿಯಲ್ಲಿ ನಾನು ಟೀ ಮಾರಾಟ ಮಾಡುತ್ತಿದ್ದೇನೆ. ಸದ್ಯ ಕೋವಿಡ್ 19 ಎಂಬ ಮಹಾಮಾರಿ ಒಕ್ಕರಿಸಿದ್ದು, ಇದು ನನ್ನ ವ್ಯಾಪಾರದ ಮೇಲೆಯೂ ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಈ ಹಣಕಾಸಿನ ಬಿಕ್ಕಟ್ಟು ಎದುರಿಸಲು ಹೊಸ ಉದ್ಯಮವನ್ನು ಪ್ರಾರಂಭಿಸಲು ಯೋಚನೆ ಮಾಡಿದ್ದು, ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋದೆ ಎಂದರು.

ನಾನು ಈ ಮೊದಲು ಸಾಲ ಪಡೆದಿಲ್ಲ ಎಂದು ಆಧಾರ್ ಕಾರ್ಡ್ ಹಾಗೂ ನನ್ನ ಬಳಿಯಿದ್ದ ಎಲ್ಲಾ ದಾಖಲೆಗಳನ್ನು ಬ್ಯಾಂಕ್ ಸಿಬ್ಬಂದಿಗೆ ತೋರಿಸಿದೆ. ಆದರೆ ಅವರು ನನ್ನ ಮಾತನ್ನು ಕೇಳಲು ಸಿದ್ಧರಿರಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಒಟ್ಟಿನಲ್ಲಿ ಇದೂವರೆಗೂ ಸಾಲ ಪಡೆಯದ ನನ್ನ ಹೆಸರಿನಲ್ಲಿ ಮತ್ತು ಯಾವಾಗ ನೀಡಲಾಗಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ರಾಜ್ ಕುಮಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *