ದೇವಸೇನಾಳಿಂದ ದೂರವಾದ್ರಾ ಬಾಹುಬಲಿ?- ಮೂವರು ಕನ್ನಡತಿಯರ ನಡ್ವೆ ಡಾರ್ಲಿಂಗ್

ಬೆಂಗಳೂರು: ಟಾಲಿವುಡ್ ದೇವಸೇನಾ ಅನುಷ್ಕಾ ಶೆಟ್ಟಿಯಿಂದ ಡಾರ್ಲಿಂಗ್ ಬಾಹುಬಲಿ ದೂರ ಆಗ್ತಿದ್ದೀರಾ ಅನ್ನೋ ಮಾತು ಬಣ್ಣದ ಲೋಕದಲ್ಲಿ ಸುಳಿದಾಡುತ್ತಿದೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಬಾಹುಬಲಿಯಲ್ಲಿ ಅನುಷ್ಕಾ ಮತ್ತು ಪ್ರಭಾಸ್ ಕೆಮಿಸ್ಟ್ರಿ ನೋಡಿದ ಅಭಿಮಾನಿಳು ರಿಯಲ್ ಲೈಫ್ ನಲ್ಲಿಯೂ ಒಂದಾದ್ರೆ ಚೆನ್ನಾಗಿರುತ್ತೆ ಅಂತ ಕನಸು ಕಂಡಿದ್ದರು. ಆದ್ರೆ ಅಭಿಮಾನಿಗಳು ಕಂಡ ಕನಸು ಕನಸಾಗಿಯೇ ಉಳಿಯಲಿದೆಯಾ ಅನ್ನೋ ಪ್ರಶ್ನೆಯನ್ನು ಖುದ್ದು ಪ್ರಭಾಸ್ ಮುನ್ನಲೆಗೆ ತಂದಿದ್ದಾರೆ.

ಪ್ರಭಾಸ್ ಮುಂದಿನ ಸಿನಿಮಾ ರಾಧೆ-ಶ್ಯಾಮ್ ಚಿತ್ರದ ಫಸ್ಟ್ ಲುಕ್ ಭಾರತೀಯ ಸಿನಿ ಅಂಗಳದಲ್ಲಿ ಸೆನ್ಸಷನಲ್ ಕ್ರಿಯೇಟ್ ಮಾಡಿದೆ. ಚಿತ್ರದ ಫಸ್ಟ್ ಲುಕ್ ನಲ್ಲಿ ಮಾಸ್ ಪ್ರಭಾಸ್ ಲವರ್ ಬಾಯ್ ಆಗಿ ಕನ್ನಡತಿ ಪೂಜಾ ಹೆಗ್ಡೆ ರೊಮ್ಯಾಂಟಿಕ್ ಪೋಸ್ ನೀಡಿದ್ದಾರೆ. ರಾಧೆ ಶ್ಯಾಮ್ ಟೀಂಗೆ ಬಾಲಿವುಡ್ ಪದ್ಮಾವತಿ, ಗುಳಿ ಕೆನ್ನೆಯ ಚೆಲುವೆ ದೀಪಿಕಾ ಪಡುಕೋಣೆ ಎಂಟ್ರಿ ಕೊಟ್ಟಿದ್ದಾರೆ. ಫಿಲಂ ಟೀಂಗೆ ಎಂಟ್ರಿ ಕೊಡುತ್ತಿದ್ದಂತೆ ದೀಪಿಕಾ ಇನ್‍ಸ್ಟಾಗ್ರಾಂ ಖಾತೆಯನ್ನು ಪ್ರಭಾಸ್ ಫಾಲೋ ಮಾಡಲಾರಂಭಿಸಿದ್ದಾರೆ.

ಪ್ರಭಾಸ್ ಇನ್‍ಸ್ಟಾಗ್ರಾಂನಲ್ಲಿ ಕೇವಲ ಐವರು ಫಾಲೋ ಮಾಡುತ್ತಿದ್ದಾರೆ. ಗೆಳೆಯ ಸುಜಿತ್, ನಟಿಯರಾದ ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ, ಶ್ರದ್ಧಾ ಕಪೂರ್ ಮತ್ತು ಭಾಗ್ಯಶ್ರೀಯವರ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ. ಆದ್ರೆ ಬಹುದಿನಗಳ ಗೆಳತಿ ಅನುಷ್ಕಾ ಶೆಟ್ಟಿಯ ಖಾತೆಯನ್ನು ಮಾತ್ರ ಫಾಲೋ ಮಾಡಿಲ್ಲ. ಇತ್ತ ದೇವಸೇನಾ ಗೆಳಯ ಬಾಹುಬಲಿಯ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

ಇತ್ತೀಚೆಗೆ ನಟಿಸುತ್ತಿರುವ ನಟಿಯರ ಖಾತೆಗಳನ್ನು ಫಾಲೋ ಮಾಡುತ್ತಿರುವ ಪ್ರಭಾಸ್ ಹಳೆಯ ಗೆಳತಿ ಅರುಂಧತಿಯನ್ನು ಮರೆತ್ರಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ದೀಪಿಕಾ, ಅನುಷ್ಕಾ ಮತ್ತು ಪೂಜಾ ಮೂವರು ಕರ್ನಾಟಕದವರಾಗಿದ್ದು, ಕನ್ನಡತಿಯರ ನಡುವೆ ಪ್ರಭಾಸ್ ಸಿಲುಕಿಕೊಂಡಿದ್ದಾರೆ ಅನ್ನೋ ಚರ್ಚೆಗಳು ಟಾಲಿವುಡ್ ಅಂಗಳದಲ್ಲಿ ಆರಂಭಗೊಂಡಿವೆ.

Comments

Leave a Reply

Your email address will not be published. Required fields are marked *