ಕೊರೊನಾ ಅಟ್ಟಹಾಸಕ್ಕೆ ಬೇಸತ್ತು ಮನೆ ಬಿಟ್ಟು ಜಮೀನು ಸೇರಿದ ಕುಟುಂಬಗಳು!

ಗದಗ: ಕೊರೊನಾ ಅಟ್ಟಹಾಸಕ್ಕೆ ಬೇಸತ್ತು ಸಾರ್ವಜನಿಕರು ಮನೆ ಬಿಟ್ಟು ತಮ್ಮ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಬದುಕುತ್ತಿರುವ ಘಟನೆ ಜಿಲ್ಲೆಯ ಮುಳಗುಂದದ ಶೀತಾಲಹರಿ ಗ್ರಾಮದಲ್ಲಿ ನಡೆದಿದೆ.

ಸುಮಾರು ಒಂದುಸಾವಿರ ಜನಸಂಖ್ಯೆ ಇರುವ ಈ ಚಿಕ್ಕ ಗ್ರಾಮದಲ್ಲಿ ಈಗಾಗಲೇ ಸೋಂಕಿನಿಂದ ಓರ್ವ ಸಾವನ್ನಪ್ಪಿದ್ದು, 10 ಜನರಿಗೆ ಸೋಂಕು ದೃಢವಾಗಿದೆ. ಗ್ರಾಮದಲ್ಲಿ ಇನ್ನೂ ಸೋಂಕಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಯಭೀತಗೊಂಡ ಸ್ಥಳೀಯರು ಊರು ಬಿಟ್ಟು ತಮ್ಮ ತಮ್ಮ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.

ಈಗಾಗಲೇ 30ಕ್ಕೂ ಅಧಿಕ ಕುಟುಂಬಗಳು ಗ್ರಾಮ ತೊರೆದು ಜಮೀನು ಸೇರಿವೆ. ಕೊರೊನಾ ತಂದಿಟ್ಟ ಸಂಕಷ್ಟದಿಂದ ಹೈರಾಣಾದ ಕೂಲಿ ಕಾರ್ಮಿಕರು, ಬಡ ಜನ್ರ ಗೋಳಾಟ ಇಲ್ಲಿ ಕೇಳತೀರದಾಗಿದೆ. ಈ ಚಿಕ್ಕ ಗ್ರಾಮದಲ್ಲಿಯೇ ವೈರಸ್ ಇಷ್ಟೊಂದು ಪಸರಿಸುವುದರಿಂದ ಊರು ತೊರೆಯುವುದೇ ಒಳ್ಳೆಯದು ಎಂದು ಕೊಂಡಿದ್ದಾರೆ.

ವೃದ್ದರು, ಚಿಕ್ಕಮಕ್ಕಳು ಇರುವವರು ಜಮೀನಿನಲ್ಲಿ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ, ಜೀವ ಉಳಿದ್ರೆ ಸಾಕಪ್ಪಾ ಅನ್ನೊ ಮನಸ್ಥಿತಿಗೆ ಜನ ಬಂದಿದ್ದಾರೆ.

 

Comments

Leave a Reply

Your email address will not be published. Required fields are marked *