ಸೀಲ್‍ಡೌನ್ ತೆರವುಗೊಳಿಸುವಾಗ ಮತ್ತೊಂದು ಪಾಸಿಟಿವ್- ಸ್ಥಳೀಯರಲ್ಲಿ ಹೆಚ್ಚಾದ ಆತಂಕ

– ಮತ್ತೆ ಸೀಲ್‍ಡೌನ್ ಮಾಡ್ದಂತೆ ಗ್ರಾಮಸ್ಥರ ಆಗ್ರಹ..!

ಮಡಿಕೇರಿ: ಸೀಲ್‍ಡೌನ್ ಏರಿಯಾ ತೆರವುಗೊಳಿಸುವಾಗ ಮತ್ತೊಂದು ಪಾಸಿಟಿವ್ ವರದಿಯಾದ ಹಿನ್ನೆಲೆಯಲ್ಲಿ ಮತ್ತೆ ಏರಿಯಾವನ್ನು ಮತ್ತೆ ಸೀಲ್‍ಡೌನ್ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ನಡೆದಿದೆ.

ಜಿಲ್ಲೆ ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಸದ್ಯ ಮಹಿಳೆ ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ. ಆದರೆ ಇದೀಗ ಮಹಿಳೆಯ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಧಿಕಾರಿಗಳು ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಏರಿಯಾವನ್ನು ಮತ್ತೆ ಸೀಲ್‍ಡೌನ್ ಮಾಡದಂತೆ ಆಗ್ರಹಿಸಿದ್ದಾರೆ.

ನಾಳೆ ಗುಂಡೂರಾವ್ ಬಡಾವಣೆಯಲ್ಲಿ ಸೀಲ್‍ಡೌನ್ ತೆರೆವುಗೊಳಿಸಬೇಕಿತ್ತು. ಆದರೆ ಮತ್ತೊಂದು ಪಾಸಿಟಿವ್ ವರದಿ ಆಗಿರುವದರಿಂದ ಮತ್ತೆ ಸೀಲ್‍ಡೌನ್ ಮಾಡುವ ಸಾಧ್ಯತೆಗಳಿವೆ. ಬಡಾವಣೆಯಲ್ಲಿ ಬಹುತೇಕರು ಕೂಲಿ ಕಾರ್ಮಿಕರೇ ವಾಸಿಸುತ್ತಿರುವುದರಿಂದ ಮತ್ತೆ ಸೀಲ್‍ಡೌನ್ ಮಾಡಿದರೆ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಸೋಂಕಿತರ ಮನೆಯನ್ನು ಮಾತ್ರ ಸೀಲ್‍ಡೌನ್ ಮಾಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *