10 ದಿನ ಕಳೆದ್ರೂ ಬಾರದ ವರದಿ – ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಹಾವೇರಿ: ಸಾಂಸ್ಥಿಕ ಕ್ವಾರಂಟೈನ್ ಆಗಿದ್ದವರ ವರದಿ ಎಂಟು ಹತ್ತು ದಿನಗಳು ಕಳೆದರೂ ಬಾರದ ಹಿನ್ನೆಲೆ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ದೂದೀಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೊರ ರಾಜ್ಯಗಳಿಂದ ಬಂದ 60ಕ್ಕೂ ಹೆಚ್ಚಿನ ಜನರನ್ನು ಸರ್ಕಾರದ ಆದೇಶದಂತೆ ಸರ್ಕಾರಿ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇಲ್ಲಿಯ ಜನರು ಸರಿಯಾಗಿ ಊಟವೂ ಸಿಗದೆ ಇತ್ತು ಕೊರೊನಾ ವರದಿಯೂ ಬಾರದೆ, ಮನೆಗೂ ಹೋಗಲಾಗದೆ ಪರದಾಟ ಅನುಭವಿಸುತ್ತಿದ್ದೇವೆ ಎಂದು ಜನರು ಕಿಡಿಕಾರಿದ್ದಾರೆ.

ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯವರ ಸೂಕ್ತವಾದ ಸ್ಪಂದನೆ ಸಿಗದೆ ಪರದಾಡುತ್ತಿದ್ದೇವೆ. ಸರಿಯಾಗಿ ಊಟ ತಿಂಡಿ ಕೊಡಿ, ನಮ್ಮ ವರದಿ ಏನಾಗಿವೆ ಎಂದು ಹೇಳಿ ನಮ್ಮನ್ನು ಬಿಡುಗಡೆ ಮಾಡಿ ಎಂದು ಕ್ವಾರಂಟೈನ್ ಆಗಿರೋ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ವ್ಯಾಬ್ ರಿಪೋರ್ಟ್ ಬೇಗ ತರಿಸಿಕೊಂಡು ನಮ್ಮನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *