ನನಗೆ ಇಲ್ಲಿ ಇಬ್ಬರೇ ಗೆಳೆಯರು ಅಂದಿದ್ದ ಸುಶಾಂತ್ ಸಿಂಗ್ ರಜಪೂತ್

ಮುಂಬೈ: ಬಾಲಿವುಡ್‍ನಲ್ಲಿನ ತಾರತಮ್ಯದಿಂದ ನೊಂದು ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾರಂಭಿಸಿದ್ದಾರೆ. ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ. ಇದೀಗ ಧೋನಿ ಸಿನಿಮಾ ಬಿಡುಗಡೆ ವೇಳೆ ಸುಶಾಂತ್ ಸಂದರ್ಶನದ ಪುಟಾಣಿ ಕ್ಲಿಪ್ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?: ಧೋನಿ ಸಿನಿಮಾ ಬಿಡುಗಡೆ ವೇಳೆ ಸುಶಾಂತ್ ನೀಡಿದ ಸಂದರ್ಶನದ ಕ್ಲಿಪ್ ಹಲವು ಪ್ರಶ್ನೆಗಳನ್ನು ಹುಟ್ಟಿಕೊಳ್ಳುವಂತೆ ಮಾಡಿದೆ. ನಿರೂಪಕಿ ನಿಮಗೆ ಬಾಲಿವುಡ್ ನಲ್ಲಿರುವ ಗೆಳೆಯರು ಯಾರು ಎಂದು ಪ್ರಶ್ನೆ ಮಾಡಿದ್ದರು. ನನಗೆ ಇಲ್ಲಿ ಯಾರು ಗೆಳೆಯರು ಇಲ್ಲ. ಇರೋದು ಇಬ್ಬರೇ. ನಾನು ಯಾರೊಂದಿಗೆ ಮಾತನಾಡಲ್ಲ ಅಂತ ಹೇಳುತ್ತಾರೆ. ಆದ್ರೆ ನಾನು ಮಾತನಾಡಲು ಹೋದ್ರೆ ನನ್ನನ್ನ ಅವೈಡ್ ಮಾಡಲಾಗುತ್ತೆ. ನನ್ನ ಕರೆಯನ್ನು ಸಹ ಸ್ವೀಕರಿಸಲ್ಲ ಎಂದು ಉತ್ತರಿಸಿದ್ದಾರೆ.

ಬಾಲಿವುಡ್‍ನಲ್ಲಿ ಸ್ಟಾರ್ ಕಿಡ್ ಮತ್ತು ಇತರೆ ಕಲಾವಿದರನ್ನು ಭಿನ್ನವಾಗಿ ನೋಡಲಾಗುತ್ತದೆ. ಸುಶಾಂತ್ ನನ್ನ ಮಾನಸಿಕವಾಗಿ ಕುಗ್ಗಿಸೋ ಪ್ರಯತ್ನಗಳು ನಡೆದಿದ್ದವು. ಹಾಗಾಗಿ ಇದು ಆತ್ಮಹತ್ಯೆಯಲ್ಲ, ಪೂರ್ವ ಯೋಜಿತ ಕೊಲೆ ಎಂದು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *