ಕಾರ್ಮಿಕರನ್ನು ಕರೆ ತರಲು ರಸ್ತೆ ಬದಿಯಲ್ಲೇ ಮಲಗಿದ ಶಾಸಕ ನಡಹಳ್ಳಿ

ವಿಜಯಪುರ: ಕ್ಷೇತ್ರದ ಕಾರ್ಮಿಕರನ್ನು ಕರೆ ತರುವದಕ್ಕಾಗಿ ಹೋಗಿದ್ದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಗೋವಾ ಗಡಿಯ ರಸ್ತೆ ಬದಿಯಲ್ಲೇ ಮಲಗಿದ್ದಾರೆ.

ಕ್ಷೇತ್ರದ ಕಾರ್ಮಿಕರು ಜೀವನೋಪಾಯಕ್ಕಾಗಿ ಗೋವಾಕ್ಕೆ ಹೋಗಿದ್ದರು. ಲಾಕ್‍ಡೌನ್‍ನಿಂದ ಕೆಲಸವೂ ಇಲ್ಲದೇ ಸಂಕಷ್ಟದಲ್ಲಿದ್ದ ಕಾರ್ಮಿಕರನ್ನು ಕರೆ ತರಲು ಶಾಸಕರು ಮುಂದಾಗಿದ್ದರು. ಹಾಗಾಗಿ ಗೋವಾ ಗಡಿದ ಭಾಗದವರೆಗೂ ತೆರಳಿ 10 ಸಾರಿಗೆ ಬಸ್ ಗಳಲ್ಲಿ ಕಾರ್ಮಿಕರನ್ನು ಕರೆ ತರಲು ಹೋಗಿದ್ದರು.

ರಾತ್ರಿ ಚೋರ್ಲಾ-ಖಾನಾಪುರ ಚೆಕ್ ಬಳಿಯ ರಸ್ತೆ ಬದಿಯೇ ಮಲಗಿದ್ದಾರೆ. 350ಕ್ಕೂ ಅಧಿಕ ಕಾರ್ಮಿಕರನ್ನು 10 ಸಾರಿಗೆ ಬಸ್ ಗಳಲ್ಲಿ ಕರೆತಂದಿದ್ದಾರೆ.

Comments

Leave a Reply

Your email address will not be published. Required fields are marked *